Site icon Vistara News

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್‌ಗೆ ಅಲ್‌ಖೈದಾ ಮುಖ್ಯಸ್ಥನ ಶಹಬ್ಬಾಸ್‌ಗಿರಿ!

ಬೆಂಗಳೂರು: ಮಂಡ್ಯದಲ್ಲಿ ಜೈ ಶ್ರೀರಾಮ್‌ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರನ್ನು `ಮುಸ್ಲಿಮರ ಹೆಮ್ಮೆʼ ಎಂದು ಅಲ್‌ಖೈದಾ ಮುಖ್ಯಸ್ಥ ಮತ್ತು ಮೋಸ್ಟ್ ವಾಂಟೆಡ್ ಉಗ್ರ ಅಯ್ಮಾನ್ ಅಲ್ ಜವಾಹಿರಿ ಮುಕ್ತಕಂಠದಿಂದ ಹಾಡಿ ಹೊಗಳಿದ್ದಾನೆ.

ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರನ್ನು ಶ್ಲಾಘಿಸಿ 9 ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಿರುವ ಜವಾಹಿರಿ, ಹಿಜಾಬ್ ನಿಷೇಧದ ವಿರುದ್ಧ ತಕ್ಬೀರ್ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ.

ಭಾರತದ ಹಿಂದೂ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ಕಿರುಕುಳಕ್ಕೆ ಒಳಗಾಗಿದ್ದು, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ಭಾರತದ ಮಹಾನ್ ಮಹಿಳೆ (ನೋಬಲ್ ವುಮೆನ್ ಆಫ್ ಇಂಡಿಯಾ) ಎಂದ ಜವಾಹಿರಿ ಕರೆದಿದ್ದಾನೆ. ಅಲ್ಲದೆ ಮುಸ್ಕಾನ್ ಖಾನ್‌ನನ್ನು ಅಲ್‌ಖೈದಾ ಮುಖ್ಯಸ್ಥ ಮುಜಾಹಿರಿ ಹೊಗಳಿ ಕವನ ಓದಿದ್ದಾನೆ.

https://vistaranews.com/wp-content/uploads/2022/04/MUZAHIRI.mp4
ಅಯ್ಮಾನ್ ಅಲ್ ಜವಾಹಿರಿ, ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ

ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಖಾನ್‌ ಬಗ್ಗೆ ನನಗೆ ತಿಳಿಯಿತು. ಈ ಸಹೋದರಿ ಧ್ವನಿ ಎತ್ತುವ ಮೂಲಕ ನನ್ನ ಹೃದಯ ಗೆದ್ದಿದ್ದಾಳೆ. ಸಹೋದರಿ ನಾವು ಸುಮ್ಮನೆ ಕೂರುವುದಿಲ್ಲ. ದೈರ್ಯವಾಗಿರು. ವಿಜಯ ಹತ್ತಿರದಲ್ಲೇ ಇದೆ ಎಂದು ಉಗ್ರ ಜವಾಹಿರಿ ವಿಡಿಯೋದಲ್ಲಿ ಹೇಳಿದ್ದಾನೆ.

https://vistaranews.com/wp-content/uploads/2022/04/MUSLIM-SLOGAN.mp4

ಅಲ್‌ಖೈದಾ ಮುಖ್ಯಸ್ಥ ಜವಾಹಿರಿಯ ಈ 9 ನಿಮಿಷಗಳ ವೀಡಿಯೊವನ್ನು ಅಲ್‌ಖೈದಾದ ಅಧಿಕೃತ ಶಬಾಬ್ ಮೀಡಿಯಾ ಬಿಡುಗಡೆ ಮಾಡಿದೆ. ಈ ವಿಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ.

Exit mobile version