Site icon Vistara News

Karnataka Cabinet: 34 ಸಚಿವರ ಪೈಕಿ 16 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್, ನಂ.1 ಸ್ಥಾನದಲ್ಲಿ ಯಾರಿದ್ದಾರೆ?

CM Siddaramaiah and B Nagendra and DK Shivakumar

ಬೆಂಗಳೂರು, ಕರ್ನಾಟಕ: ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರದಲ್ಲಿ ಎಲ್ಲ ಮಂತ್ರಿ ಸ್ಥಾನಗಳ್ನು (Karnataka Cabinet) ಭರ್ತಿ ಮಾಡಲಾಗಿದೆ. ಕಳೆದ ವಾರ 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರೆ, ನಿನ್ನೆ ಮತ್ತೆ 24 ಶಾಸಕರು ಸಚಿವರಾಗಿದ್ದಾರೆ. ಈ ಮೂಲಕ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಂತಾಗಿದೆ. ಈ ಮಧ್ಯೆ, ಸಿದ್ದರಾಮಯ್ಯ ಸಂಪುಟದಲ್ಲಿರುವ ಸಚಿವರ ಪೈಕಿ ಅಂದರೆ, 34 ಸಚಿವರ ಪೈಕಿ 16 ಜನರು ಕ್ರಿಮಿನಲ್ ಪ್ರಕರಣಗಳನ್ನು (Criminal Cases) ಎದುರಿಸುತ್ತಿದ್ದಾರೆ. ಎಡಿಆರ್ (ADR) ಈ ಮಾಹಿತಿಯನ್ನು ಹೊರ ಹಾಕಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ಸಚಿವ ಬಿ ನಾಗೇಂದ್ರ ಅವರ 42 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಈ ಪಟ್ಟಿಯಲ್ಲಿ ಅವರೇ ಅಗ್ರಸ್ಥಾನಿಯಾಗಿದ್ದಾರೆ. ನಾಗೇಂದ್ರ ನಂತರದ ಸ್ಥಾನದಲ್ಲಿ ಉಪ ಮುಖ್ಯಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಅವರಿದ್ದು, 19 ಕ್ರಿಮಿನಲ್ ಪ್ರಕ್ರಣಗಳ ವಿಚಾರಣೆ ನಡೆಯುತ್ತಿದೆ. ನಾಗೇಂದ್ರ ಅವರ ವಿರುದ್ಧ ಪ್ರಕರಣಗಳಲ್ಲಿ 21 ಪ್ರಕರಣಗಳು ಲೋಕಾಯುಕ್ತ ಮುಂದಿವೆ. ಉಳಿದ ಪ್ರಕರಣಗಳು ಸಿಬಿಐ, ಸಿಐಡಿಗಳ ಮುಂದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೂಡ 13 ಪ್ರಕರಣಗಳಿವೆ. ಕಾನೂನು ಬಾಹಿರ ಸಭೆ, ಚುನಾವಣೆ ಮೇಲೆ ಪ್ರಭಾವ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಜಮೀರ್ ಖಾನ್ ಅವರು ವಿರುದ್ಧ 6 ಗಂಭೀರ ಪ್ರಕರಣಗಳಿವೆ. ಇನ್ನುಳಿದಂತೆ ಪ್ರಿಯಾಂಕ್ ಖರ್ಗೆ(9), ಈಶ್ವರ್ ಖಂಡ್ರೆ(7), ಎಂ ಬಿ ಪಾಟೀಲ್(5), ರಾಮಲಿಂಗಾ ರೆಡ್ಡಿ(4), ಡಾ. ಜಿ ಪರಮೇಶ್ವರ್(3), ಎಚ್ ಕೆ ಪಾಟೀಲ್ (2), ಡಿ ಸುಧಾಕರ್ (2), ಸತೀಶ್ ಜಾರಕಿಹೊಳಿ (2), ಕೃಷ್ಣ ಭೈರೇಗೌಡ (1), ಎನ್ ಚಲುವರಾಯಸ್ವಾಮಿ (1), ಕೆ ಎಚ್ ಮುನಿಯಪ್ಪ (1) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ

ಅಸೋಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(Association for Demorcatic Reforms- ADR) ಈ ಮಾಹಿತಿಯನ್ನು ಹೊರ ಹಾಕಿದೆ. ಚುನಾವಣಾ ವೇಳೆ ಆಯೋಗಕ್ಕೆ ಸಲ್ಲಿಸಲಾದ ಅಫಿಡವಿಟ್‌ಗಳ ಮೂಲಕ ಈ ಪಟ್ಟಿಯನ್ನು ರಚಿಸಲಾಗಿದೆ.

ಕರ್ನಾಟಕ ರಾಜಕೀಯದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version