Site icon Vistara News

Accident | ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿ: ಬಸ್ ಪಲ್ಟಿ, 21 ಮಂದಿ ಪಾರು

accident

ಮಡಿಕೇರಿ: ಬೋಯಿಕೇರಿ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಡಿಕ್ಕಿಯಾಗಿದ್ದು (Accident ), ಅಪಘಾತದ ಬಳಿಕ ಬಸ್‌ ಪಲ್ಟಿಯಾದರೂ ಅದೃಷ್ಟವಶಾತ್‌ ಚಾಲಕ, ನಿರ್ವಾಹಕರು ಸೇರಿ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಗುಚಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್‌

ಮಡಿಕೇರಿಯಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌- ಬೈಕ್‌ ಮುಖಾಮುಖಿ ಡಿಕ್ಕಿಯಾಗಿವೆ. ಈ ವೇಳೆ ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಬಸ್ ಪಲ್ಟಿಯಾಗಿದೆ. ಸಣ್ಣ ಪುಟ್ಟಗಾಯಗಳಿಂದ ಬೈಕ್‌ ಸವಾರ ಹಾಗೂ ಬಸ್‌ನಲ್ಲಿದ್ದ 21 ಮಂದಿ ಪಾರಾಗಿದ್ದಾರೆ.

ಬಸ್‌ ಮಗುಚಿ ಬಿದ್ದಂತೆ ಅಲ್ಲಿದ್ದ ಸ್ಥಳೀಯರೆಲ್ಲವೂ ಬಸ್‌ನ ಹಿಂಬದಿಯ ಗಾಜು ಒಡೆದು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತದಿಂದಾಗಿ ಕೆಲಕಾಲ ಬೋಯಿಕೇರಿ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಇದನ್ನೂ ಓದಿ | Drunk and Drive | ಕುಡಿದು ಕಾರು ಚಾಲನೆ; ಅಪಘಾತ ಮಾಡಿ ಇನ್‌ಸ್ಪೆಕ್ಟರ್‌, ಪತ್ನಿ ಕಿರಿಕ್

Exit mobile version