Site icon Vistara News

Ambulance Problem | ವೈದ್ಯರು ಇಲ್ಲ, ಆಂಬ್ಯುಲೆನ್ಸ್ ಚಾಲಕನೂ ಇಲ್ಲದೆ ಎದೆನೋವಿನಿಂದ ವ್ಯಕ್ತಿ ಸಾವು

Ambulance Problem

ಚಾಮರಾಜನಗರ: ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟ ಘಟನೆಯೊಂದು ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ. ತೆರಕಣಾಂಬಿ ಗ್ರಾಮದ ಮಹೇಶ್ (33) ವೈದ್ಯರಿಲ್ಲದೆ, ಆಂಬುಲೆನ್ಸ್ ಇದ್ದರೂ (Ambulance Problem) ಚಾಲಕ ಇಲ್ಲದೆ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

ವಿಷಯ ತಿಳಿದ ಕೂಡಲೇ ತೆರಕಣಾಂಬಿ ಆಸ್ಪತ್ರೆಗೆ ಡಿಎಚ್ಒ ಡಾ. ವಿಶ್ವೇಶ್ವರಯ್ಯ ಭೇಟಿ ನೀಡಿ, ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಂಬ್ಯುಲೆನ್ಸ್ ಚಾಲಕರಿಗೂ ಸ್ಥಳದಲ್ಲಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂದೆ ಈ ರೀತಿ ಅವಘಡ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ | ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಆಗುಂಬೆ ಬಳಿ ಪಲ್ಟಿ, ನಾಲ್ವರಿಗೆ ಗಾಯ


	
Exit mobile version