Site icon Vistara News

Kidnap Attempt: ಚಿಕ್ಕೋಡಿ ಶಾಲೆ ಬಳಿ ಕಿಡ್ನ್ಯಾಪ್‌ಗೆ ಯತ್ನ; ವ್ಯಕ್ತಿಯ ಕೈಗೆ ಕಚ್ಚಿ ಬಚಾವ್‌ ಆದ ವಿದ್ಯಾರ್ಥಿನಿ

kidnap attempt

ಚಿಕ್ಕೋಡಿ: ಪಟ್ಟಣದ ವಿದ್ಯಾನಗರ ಬಡಾವಣೆಯ ಶಾಲೆ ಬಳಿ ವಿದ್ಯಾರ್ಥಿನಿಯ ಕಿಡ್ನ್ಯಾಪ್‌ಗೆ ಯತ್ನ ನಡೆದಿದೆ. ವಿದ್ಯಾರ್ಥಿನಿ ಶಾಲೆಯಿಂದ ಹೊರಗಡೆ ಬರುತ್ತಿದ್ದಂತೆ ಮುಖಕ್ಕೆ ಬಟ್ಟಿ ಕಟ್ಟಿ 200 ಮೀಟರ್ ಎಳೆದೊಯ್ದಾಗ, ವ್ಯಕ್ತಿಯ ಕೈಗೆ ಕಚ್ಚಿ ವಿದ್ಯಾರ್ಥಿನಿ ಬಚಾವ್‌ ಆಗಿದ್ದಾಳೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ನಡೆದಿದೆ. ಶಾಲೆಯ ಕಾಂಪೌಂಡ್ ಬಳಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತ ಆಸಾಮಿ, ವಿದ್ಯಾರ್ಥಿನಿ ಹೊರಗೆ ಬರುತ್ತಿದ್ದಂತೆ ಮುಖಕ್ಕೆ ಬಟ್ಟೆ ಕಟ್ಟಿ ಎಳೆದೊಯ್ದಿದ್ದಾನೆ. ಈ ವೇಳೆ ವ್ಯಕ್ತಿಯ ಕೈಗೆ ಕಚ್ಚಿ ವಿದ್ಯಾರ್ಥಿನಿ ಅಪಾಯದಿಂದ ಪಾರಾಗಿದ್ದಾಳೆ.

ಎಳೆದೊಯ್ಯುತ್ತಿದ್ದಾಗ ವಿದ್ಯಾರ್ಥಿನಿ ಕಿರುಚಾಟದಿಂದ ಸ್ಥಳದಿಂದ ವ್ಯಕ್ತಿ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶಾಲಾ ಆವರಣದ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುವುದು ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಪೊಲೀಸರು ತಿಳಿಸಿದ್ದಾರೆ.

ಪ್ರೇಮಿ ಜತೆ ಓಡಿಹೋದ 2 ಮಕ್ಕಳ ತಾಯಿ ; ಸಿಟ್ಟಿಗೆದ್ದ ಗಂಡನಿಂದ ಲವರ್‌ ಮನೆ ಧ್ವಂಸ

ಚಿಕ್ಕೋಡಿ: ವಿವಾಹಿತ ಮಹಿಳೆಯೊಬ್ಬಳು ತಾನು ಪ್ರೇಮಿಸುತ್ತಿದ್ದ ವಿವಾಹಿತ ಪುರುಷನ ಜತೆ ಪರಾರಿಯಾಗಿದ್ದಾಳೆ (woman elopes with Married lover). ಇದರಿಂದ ಸಿಟ್ಟಿಗೆದ್ದ ಗಂಡನ ಮನೆಯವರು ಪ್ರೇಮಿ ಯುವಕನ ಮನೆಗೆ ತಂಡ ಕಟ್ಟಿಕೊಂಡು ಹೋಗಿ ದಾಳಿ ಮಾಡಿದ್ದಾರೆ (Husband attacks on lovers house). ಈ ಘಟನೆ (Love Case) ನಡೆದಿರುವುದು ಬೆಳಗಾವಿ ಜಿಲ್ಲೆಯ (Belagavi News) ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ.

ಜಿನ್ರಾಳ ಗಾಮದ ರೇಣುಕಾ ವಾಲಿಕಾರ್‌ ಮತ್ತು ಲಗಮನ್ನ ವಾಲಿಕಾರ್‌ (34) ಎಂಬವರ ಮಧ್ಯೆ ಕಳೆದ ಕೆಲವು ಸಮಯದಿಂದ ಲವ್ವಿ ಡವ್ವಿ ಇತ್ತು. ರೇಣುಕಾಗೆ ಮದುವೆಯಾಗಿ ಇಬ್ಬರು ಮಕ್ಕಳು ಬೇರೆ ಇದ್ದಾರೆ. ಲಗಮನ್ನ ವಾಲಿಕಾರ್‌ ಕೂಡಾ ವಿವಾಹಿತ. ಅವನಿಗೆ ಒಬ್ಬ ಮಗನಿದ್ದಾನೆ. ಅವರಿಬ್ಬರೂ ಪರಸ್ಪರ ಮಾತನಾಡಿಕೊಂಡು ಮಂಗಳವಾರ ರಾತ್ರಿ ಊರಿಂದಲೇ ಪರಾರಿಯಾಗಿದ್ದಾರೆ. ಇದರಿಂದ ಕೆರಳಿದ ಗಂಡನ ಮನೆಯವರು ರೇಣುಕಾಳ ಪ್ರೇಮಿಯ ಮನೆ ಮೇಲೆ ದಾಳಿ ಮಾಡಿದ್ದಾರೆ.

ಲಗಮನ್ನಾ ವಾಲಿಕಾರ್‌ ಮನೆಯಲ್ಲಿ ತಾಯಿ ಶಾಂತವ್ವ ಮತ್ತು ಇತರರು ವಾಸವಾಗಿದ್ದಾರೆ. ರೇಣುಕಾ ಲಗಮನ್ನನ ಜತೆ ಪರಾರಿಯಾಗಿದ್ದನ್ನು ತಿಳಿದ ಗಂಡನ ಮನೆಯವರು ಸೇರಿ ಶಾಂತವ್ವ ವಾಸವಿದ್ದ ಮನೆ ಮೇಲೆ ಅಟ್ಯಾಕ್ ಮಾಡಿದ್ದಾರೆ. ಮನೆಯ ಮೇಲೆ ಕಲ್ಲು ತೂರಿ, ಪೀಠೋಪಕರಣ, ಅಡುಗೆ ಸಾಮಗ್ರಿ ಸೇರಿದಂತೆ ಎಲ್ಲ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

30ಕ್ಕೂ ಅಧಿಕ ಜನರು ಇರುವ ತಂಡ ಮನೆಯ ಮೇಲೆ ಅಟ್ಯಾಕ್ ಮಾಡಿದೆ. ದುಷ್ಕರ್ಮಿಗಳು ಕೈಯಲ್ಲಿ ಕುಡುಗೋಲು, ಕೊಡ್ಲಿ, ಕಟ್ಟಿಗೆ ಹಿಡಿದುಕೊಂಡು ಅಟ್ಯಾಕ್ ಮಾಡಿ‌ದ್ದಾರೆ ಎಂದು ಆರೋಪಿಸಲಾಗಿದೆ.

ಮನೆಯಲ್ಲಿ ಲಗಮನ್ನ ವಾಲೀಕಾರ್‌ನ ತಾಯಿ, ಅಜ್ಜಿ ಮತ್ತು ಹೆಂಡತಿ ಹಾಗೂ ಮಗ ಇದ್ದರು. ಅವರು ಹತ್ತಾರು ಮಂದಿ ಮನೆಯತ್ತ ಧಾವಿಸಿ ಬರುತ್ತಿರುವ ಸುದ್ದಿ ಕೇಳಿ ಪಕ್ಕದ ಮನೆಯಲ್ಲಿ ಅಡಗಿ ಕುಳಿತಿದ್ದರು. ಹೀಗಾಗಿ ಅವರ ಪ್ರಾಣಕ್ಕೆ ಏನೂ ಅಪಾಯ ಉಂಟಾಗಿಲ್ಲ.

ಮಗ ಮಾಡಿದ ತಪ್ಪಿಗೆ ತಾಯಿಯ ಮನೆಯನ್ನ ನಾಶ ಮಾಡಿ ಅಟ್ಟಹಾಸಗೈದ ದುಷ್ಕರ್ಮಿಗಳು ಮನೆಯನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಇದರ ಜತೆಗೆ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ : Love Case : ರೊಟ್ಟಿ ಮಾರೋ ಆಂಟಿ- ಡ್ರೈವರ್‌ ಅಂಕಲ್‌ ಲವ್‌ ಸ್ಟೋರಿಗೆ ಬಿತ್ತು ಬೆಂಕಿ!

ಮಹಿಳೆಯ ಮಾವ ಸಾಮಯ್ಯ ವಾಲಿಕಾರ್, ಕೆಂಪಣ್ಣ ವಾಲಿಕಾರ್, ರೇಣುಕಾ ಗಂಡ ದುಂಡಪ್ಪ ಫಕ್ಕೀರಪ್ಪ ವಾಲಿಕಾರ್, ಭಾಮೈದ ನಿಂಗಪ್ಪ ವಾಲಿಕಾರ್, ಭರಮಾ ವಾಲಿಕಾರ್, ಹನುಮಂತ ಲಗಮಾ ವಾಲಿಕಾರ್, ನಿಂಗಪ್ಪ ಲಗಮಾ ವಾಲಿಕಾರ್, ಲಗಮಾ ಯಲಗುಂಡ ವಾಲಿಕಾರ್ ಸೇರಿ ಹಲವರಿಂದ ದಾಳಿ ನಡೆದಿದೆ ಎಂದು ದೂರು ನೀಡಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version