Site icon Vistara News

Attempt to Murder | ಗುರಾಯಿಸಿದನೆಂಬ ಕಾರಣಕ್ಕೆ ಮಚ್ಚಿನಿಂದ ಹಲ್ಲೆ; ನೇತಾಡಿದ ಕಾಲುಗಳು!

attempt to murder 3

ಬೆಂಗಳೂರು: ಈಗೀಗ ಯಾವ ಕಾರಣಕ್ಕೆ ಹಲ್ಲೆ ನಡೆಯುತ್ತದೆ ಎಂದು ಹೇಳುವುದೇ ಕಷ್ಟವಾಗಿದೆ. ಬ್ಯಾಟರಾಯನಪುರ ಸಮೀಪದ ಎಸ್‌ಎಲ್‌ವಿ ಪಾರ್ಟಿ ಹಾಲ್‌ ಸಮೀಪ ಯುವಕನೊಬ್ಬ ಗುರಾಯಿಸಿದ್ದಾನೆ ಎಂಬ ಕಾರಣಕ್ಕೆ ಮೂವರು ಯುವಕರು ಲಾಂಗು, ಮಚ್ಚಿನಿಂದ ಭೀಕರವಾಗಿ ಹಲ್ಲೆ (Attempt to Murder) ಮಾಡಿದ್ದು, ಕಾಲುಗಳು ತುಂಡಾಗಿ ನೇತಾಡುತ್ತಿದ್ದವು. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮಶ್ರೂಮ್ ಸಪ್ಲೈ ಮಾಡುತ್ತಿದ್ದ ಸಂದೀಪ್ ಎಂಬಾತನ ಮೇಲೆ ಗಂಭೀರ ಹಲ್ಲೆಯಾಗಿದೆ. ಗುರಾಯಿಸಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯೇಸುದಾಸ್@ ಕ್ರಿಶ್ ಹಾಗೂ ಮನೋಜ್ ಹಾಗೂ ಇನ್ನೊಬ್ಬ ಯುವಕ ಮೊಪೆಡ್‌ನಲ್ಲಿ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಂದೀಪ್‌ ತನ್ನ ಗೆಳೆಯರ ಜತೆ ಮಾತನಾಡುತ್ತಿದ್ದ. ಆದರೆ, ಈ ದಾಳಿಗೆ ಹೆದರಿ ಗೆಳೆಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಲಾಂಗ್‌ನಿಂದ ಹಲ್ಲೆ ನಡೆಸಿದ್ದ ಕಾರಣ ಸಂದೀಪ್‌ ಕಾಲು ಕಟ್ ಆಗಿದ್ದರೆ, ತಲೆ, ಕೈಭಾಗಗಳಿಗೂ ಗಾಯಗಳಾಗಿವೆ. ಅಲ್ಲದೆ, ಕಾಲುಗಳು ನೇತಾಡುತ್ತಿದ್ದವು ಎಂದು ಹೇಳಲಾಗಿದೆ. ಇಷ್ಟು ಮಾಡಿ ಆರೋಪಿಗಳು ಆತನನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂದೀಪ್‌ ತನ್ನನ್ನು ರಕ್ಷಣೆ ಮಾಡುವಂತೆ ಕೋರಿಕೊಂಡರೂ ಯಾರೂ ಬರಲಿಲ್ಲ. ಸತತ ಒಂದು ಗಂಟೆ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ ಎನ್ನಲಾಗಿದೆ. ಇದೇ ವೇಳೆ ಆಂಬ್ಯುಲೆನ್ಸ್‌ಗಾಗಿ ಹತ್ತಾರು ಬಾರಿ ಕರೆ ಮಾಡಿದರೂ ಸ್ಥಳಕ್ಕೆ ಬರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂದೀಪ್‌ ಸಹೋದರ, ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸಂದೀಪ್‌ ಅವರಿಗೆ ಈಗ ಚಿಕಿತ್ಸೆ ದೊರೆಯುತ್ತಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case | ಯಲಹಂಕ ಕೊಲೆ ಕೇಸ್‌ಗೆ ಟ್ವಿಸ್ಟ್‌; ಆಂಧ್ರದ ಸರ್ಕಾರಿ ಅಧಿಕಾರಿ ವರಿಸಲು ಗಂಡನನ್ನೇ ಕೊಲ್ಲಿಸಿದಳು!

Exit mobile version