Site icon Vistara News

ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಠೇವಣಿಯೂ ನಷ್ಟವಾಗುತ್ತದೆ ಎಂದು ಪ್ರಮೋದ ಮುತಾಲಿಕ್ ಕಿಡಿ

ಬಾಗಲಕೋಟೆ : ಬಾದಾಮಿ ಶಾಸಕ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಕಿಡಿಕಾರಿದ್ದಾರೆ. ಬಾದಾಮಿ ಪಟ್ಟಣದ ಹಿಂದೂ ಸಮಾಜ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್‌, ಮುಂದಿನ ಸಾರಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಡಿ. ನೀವು ಗೆದ್ದ 6 ತಿಂಗಳಲ್ಲಿ ಬಾದಾಮಿಯಲ್ಲಿನ ಹಿಂದೂ ರುದ್ರಭೂಮಿಯನ್ನು ಮುಸ್ಲಿಮರಿಗೆ ನೀಡಿದ್ದೀರಿ. ಈಗಾಗಲೇ ಅವರಿಗೆ ಹನ್ನೆರಡು ಎಕರೆ ಜತೆ, ನಮ್ಮದು ಮೂರು ಎಕರೆ ಸೇರಿಸಿ ಕೊಟ್ಟಿದ್ದೀರಿ. ಹಿಂದೂಗಳು ಸತ್ತರೆ, ಮಣ್ಣು ಮಾಡಲು ನಿಮ್ಮ ಮನೆಗೆ ಬರಬೇಕಾ? ಎಂದು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಇದನ್ನೂ ಓದಿ : ಆಜಾನ್‌ V/s ಭಜನೆ:‌ ಹರಿಪ್ರಸಾದ್ ಹೇಳಿಕೆಗೆ ಪ್ರಶಾಂತ್ ಸಂಬರ್ಗಿ ಕಿಡಿ

ಈ ದೇಶದಲ್ಲಿ ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಬಸವಣ್ಣನವರು, ಸ್ವಾಮಿ ವಿವೇಕಾನಂದರಂತಹ ಮಹನಿಯರು ಹುಟ್ಟಿ ಬೆಳೆದಿದ್ದಾರೆ. ಯಾವ ಮತದಾರರೂ ನಿಮ್ಮನ್ನು ಗೆಲ್ಲಿಸುವುದಿಲ್ಲ ಎಂದು ಸಿದ್ದು ವಿರುದ್ದ ಗುಡುಗಿದರು.

ಇದನ್ನೂ ಓದಿ |ಛೋಟಾ ಪಾಕಿಸ್ತಾನ್‌ ಎಂದ ಇಬ್ಬರ ಬಂಧನ: ಎನ್‌ಕೌಂಟರ್‌ ಮಾಡಿ ಬಿಸಾಕಿ ಎಂದ ಪ್ರಮೋದ್‌ ಮುತಾಲಿಕ್‌

Exit mobile version