Site icon Vistara News

Karnataka Election 2023: ಡಿ ಕೆ ಶಿವಕುಮಾರ್‌ ನಿನಗೆ ಎಷ್ಟು ತಾಯಂದಿರು ಎಂದು ಪ್ರಶ್ನಿಸಿದ ಬಸನಗೌಡ ಪಾಟೀಲ್ ಯತ್ನಾಳ್

Basangouda Patil Yatnal asked DK Shivakumar

ಗಂಗಾವತಿ, ಕರ್ನಾಟಕ: ಸೋನಿಯಾ ಗಾಂಧಿಯ ಬಗ್ಗೆ ಮಾತನಾಡಿದರೆ ಡಿ.ಕೆ. ಶಿವಕುಮಾರ್ (DK Shivakumar) ತನ್ನ ತಾಯಿಯ ಬಗ್ಗೆ ಮಾತನಾಡಿದ್ದು ಎಂದು ಭಾವಿಸಿ, ‘ಯತ್ನಾಳ್ ನಿಮ್ಮ ನಾಲಿಗೆ ಕತ್ತರಿಸುತ್ತೇವೆ’ ಎಂದು ಬೆದರಿಕೆ ಹಾಕುತ್ತಾರೆ. ಅಸಲಿಗೆ ಡಿ ಕೆ ಶಿವಕುಮಾರ್‌ಗೆ ಎಷ್ಟು ಜನ ತಾಯಂದಿರು ಎಂದು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಪ್ರಶ್ನಿಸಿದರು(Karnataka Election 2023:).

ಗಂಗಾವತಿ ನಗರದಲ್ಲಿ ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕನಕಪುರದಲ್ಲಿರುವ ಅವರ ತಾಯಿಗೆ ಗೌರವ ನೀಡೋಣ. ಇಟಲಿಯವಳು ಹೇಗೆ ನಿನಗೆ ತಾಯಿ ಆಗುತ್ತಾಳೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಈ ಕಾಂಗ್ರೆಸ್‌ನವರು ಎಲ್ಲರಿಗೂ ಅಪ್ಪಾಜಿ ಎಂದು ಕರೆಯುತ್ತಾರೆ. ಕಂಡ ಕಂಡ ಮಹಿಳೆಯರಿಗೆ ತಾಯಿ ಅಂತಾ ಅಂತಾರೆ. ರಾಜಕಾರಣದಲ್ಲಿ ಅಪ್ಪಾಜಿ, ತಾಯಿ ಎನ್ನುವವರು ಭಾರಿ ಡೇಂಜರ್ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇದನ್ನೂ ಓದಿ: Karnataka Election 2023: ರಾಹುಲ್ ಗಾಂಧಿ ಅವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್‌: ಬಸನಗೌಡ ಪಾಟೀಲ್ ಯತ್ನಾಳ್

ನಿನಗೆ ಮತ್ತು ನಿನ್ನ ಕಾರ್ಯಕರ್ತರಿಗೆ ಗಂಡಸ್ತನ ಇದ್ದರೆ ನನ್ನ ನಾಲಿಗೆ ಕತ್ತರಿಸುವುದಲ್ಲ, ಮುಟ್ಟಿಯಾದರೂ ನೋಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು. ”ಮಿಸ್ಟರ್ ಡಿ.ಕೆ. ಧಮ್ಕಿ ಕೊಡುತ್ತೀರಾ..? ಗೂಂಡಾಗಿರಿ ಮಾಡುತ್ತೀರಾ..? ಕರ್ನಾಟಕವನ್ನು ಕನಕಪುರ ಎಂದು ಭಾವಿಸಿದ್ದೀರಾ.? ಇಂಥ ಗೂಂಡಾಗಿರಿ ಪ್ರವೃತ್ತಿಯವರು ಮುಖ್ಯಮಂತ್ರಿಯಾದರೆ ಏನು ಕತೆ? ಡಿ.ಕೆ. ಶಿವಕುಮಾರ್ ಮಾತನಾಡುವ ಶೈಲಿ, ನಡೆಯುವ ಶೈಲಿ ನೋಡಿದರೆ ಗೂಂಡಾಗಿರಿ ಇದೆ. ಇಂಥವರು ನಮ್ಮಂತವರಿಗೆ ಧಮ್ಕಿ ಕೊಟ್ಟರೆ ನಿಮ್ಮಂಥ ಜನಸಾಮಾನ್ಯರ ಕತೆ ಏನು? ಹೀಗಾಗಿ ಕಾಂಗ್ರೆಸ್‌ಗೆ ಮತ ಹಾಕಬೇಡಿ,” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Exit mobile version