Site icon Vistara News

Bharatiya Janata Party | ನಿಜವಾದ ಅಹಿಂದ ನಾಯಕ ಬೊಮ್ಮಾಯಿ ಎಂದ ಬಿಜೆಪಿ; ಕ್ರೆಡಿಟ್‌ ತಗೊಂಡ್ರೆ ತಪ್ಪೇನು ಎಂದ ತಾರಾ

BJP tara anuradha in bellary navashakti samavesha

ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ನಾಯಕ ಎನ್ನುವ ಹಿನ್ನೆಲೆಯಲ್ಲಿ ಇದೀಗʼ ನಿಜವಾದ ಅಹಿಂದ ನಾಯಕ ನಾಯಕ ನಮ್ಮ ಸಿಎಂ ಬೊಮ್ಮಾಯಿʼ ಎಂದು ಬಿಜೆಪಿ (Bharatiya Janata Party) ನಾಯಕರು ಹೇಳುತ್ತಿದ್ದಾರೆ.

ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಆಯೋಜಿಸಿರುವ ನವಶಕ್ತಿ ಸಮಾವೇಶಕ್ಕೆ ಬಿಜೆಪಿ ಕಾರ್ಯಕರ್ತರು ಈ ರೀತಿಯ ಟಿ ಷರ್ಟ್‌ಗಳನ್ನು ಧರಿಸಿ ಬಂದಿದ್ದಾರೆ.

ಇತ್ತೀಚೆಗೆ ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ನಿರ್ಧಾರ ಮಾಡಿರುವ ಬೊಮ್ಮಾಯಿ ಅವರನ್ನು ಅಹಿಂದ ನಾಯಕರ ಎಂದು ಬಿಂಬಿಸುವ ಮೂಲಕ ಸಿದ್ದರಾಮಯ್ಯ ಅವರ ಶಕ್ತಿ ಕುಂದಿಸಲು ಬಿಜೆಪಿ ತಯಾರಿ ನಡೆಸಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ರಾಜುಗೌಡ ಹಾಗೂ ಶ್ರೀರಾಮುಲು ಅಭಿಮಾನಿಗಳು ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ರಾಜ್ಯಾದ್ಯಂತ ಬಿಜೆಪಿ ಅಲೆ ಎಂದ ತಾರಾ

ನವಶಕ್ತಿ ಸಮಾವೇಶದ ಆರಂಭಕ್ಕೂ ಮುನ್ನ ಮಾತನಾಡಿದ ನಟಿ ತಾರಾ, ಸಾಧನೆಯನ್ನು ಈ ಸಮಾವೇಶದ ಮೂಲಕ ಹೇಳಲು ಹೊರಟಿದ್ದೇವೆ. ನವಶಕ್ತಿ ಸಮಾವೇಶಕ್ಕೆ ಲಕ್ಷಾಂತರ ಮಂದಿ ಕಾರ್ಯಕರ್ತರು ಬಂದಿದ್ದಾರೆ. ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆ ಬಿಜೆಪಿ ಪಕ್ಷದ ಅಲೆ ಎದ್ದು ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಜನರು ಆರ್ಶಿವಾದ ಮಾಡತ್ತಾರೆ. ನಾವು ಮೀಸಲಾತಿಗಾಗಿ ಬಹಳಷ್ಟು ಕೆಲಸ ಮಾಡಿದ್ದೇವೆ. ಮಾಡಿದ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಂಡರೆ ತಪ್ಪು ಏನು? ಎಂದಿದ್ದಾರೆ.

ಇದನ್ನೂ ಓದಿ | Bharatiya Janata Party | ಬೃಹತ್‌ ನವಶಕ್ತಿ ಸಮಾವೇಶಕ್ಕೆ ಫುಲ್‌ ರೆಡಿ, ವೇದಿಕೆಯಲ್ಲೇ ವಾಲ್ಮೀಕಿ ಪುತ್ಥಳಿ

Exit mobile version