Site icon Vistara News

Leopard Attack | ರಾಮನಗರದಲ್ಲಿ ಚಿರತೆ ದಾಳಿಯಿಂದ ಯುವಕನಿಗೆ ಗಾಯ

Leopard Attack

ರಾಮನಗರ: ತಾಲೂಕಿನ ಜೈಪುರ ಗೇಟ್‌ ಬಳಿ ಚಿರತೆ ದಾಳಿಯಿಂದ(Leopard Attack) ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಜೈಪುರದಿಂದ ರಾಮನಗರಕ್ಕೆ ಬರುವಾಗ ದಿಲೀಪ್ ಕುಮಾರ್ ಎಂಬಾತನ ಮೇಲೆ ಚಿರತೆ ದಾಳಿ ಮಾಡಿದೆ. ಯುವಕನಿಗೆ ಮುಖ ಹಾಗೂ ಕೈ ಭಾಗಕ್ಕೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿರತೆ ದಾಳಿ, ೨ ಕರುಗಳಿಗೆ ಗಾಯ
ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಚಿರತೆ ದಾಳಿಯಿಂದ ಎರಡು ಕರುಗಳು ಗಾಯಗೊಂಡಿದ್ದು, ಒಂದು ಕರು ನಾಪತ್ತೆಯಾಗಿದೆ.

ಗೋಶಾಲೆಯಲ್ಲಿ ಬುಧವಾರ 15 ಕರುಗಳನ್ನು ಮೇಯಲು ಬಿಡಲಾಗಿತ್ತು. ಈ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದ್ದರಿಂದ ಕರುಗಳು ಗಾಬರಿಕೊಂಡು ತಪ್ಪಿಸಿಕೊಳ್ಳಲು ಓಡಿವೆ. ಈ ವೇಳೆ ಚಿರತೆ ದಾಳಿಯಲ್ಲಿ ಎರಡು ಕರುಗಳು ಗಂಭೀರವಾಗಿ ಗಾಯಗೊಂಡಿದ್ದು, ಮತ್ತೊಂದು ಕರು ನಾಪತ್ತೆಯಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಗೋಶಾಲೆ ಒಳಗೆ ಅರಣ್ಯ ಇಲಾಖೆಯಿಂದ ಬೋನುಗಳನ್ನು ಇಡಲಾಗಿದೆ.

ಇದನ್ನೂ ಓದಿ | Rain News | ಸವದತ್ತಿಯಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಯುವತಿ ಸಾವು

Exit mobile version