Site icon Vistara News

Encounter | ಕುಖ್ಯಾತ ದರೋಡೆಕೋರನ ಕಾಲಿಗೆ ಪೊಲೀಸರಿಂದ ಗುಂಡೇಟು

robber

ನೆಲಮಂಗಲ: ಬೆಳ್ಳಂಬೆಳಗ್ಗೆ ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆಕೋರನೊಬ್ಬನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

ಕುತ್ಯಾತ ದರೋಡೆಕೋರ ಯೋಗಾನಂದ ಎಂಬಾತನನ್ನು ಗುಂಡು ಹಾರಿಸಿ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ಶಶಿಧರ್‌ ಫೈರಿಂಗ್ ಮಾಡಿದ್ದಾರೆ.

ಪೊಲೀಸ್‌ ಇನ್‌ಸ್ಪೆಕ್ಟರ್‌ ಶಶಿಧರ್

ಗಾಯಗೊಂಡು ಕಾನ್‌ಸ್ಟೇಬಲ್‌ ಹನುಮಂತ ಹಿಪ್ಪರಗಿ

ಪ್ರಕರಣವೊಂದರಲ್ಲಿ ಬಂಧಿಸಿದ ಯೋಗಾನಂದನನ್ನು ಸ್ಥಳ ಮಹಜರಿಗಾಗಿ ಕೃತ್ಯದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಸ್ಥಳದಲ್ಲಿ ಆತ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಹಾಲೋ ಬ್ರಿಕ್‌ ತೆಗೆದುಕೊಂಡು ಕಾನ್‌ಸ್ಟೇಬಲ್ ಹನುಮಂತ ಹಿಪ್ಪರಗಿ ಕೈ ಮೇಲೆ ಎತ್ತಿಹಾಕಿದ್ದಾನೆ. ಆತ್ಮರಕ್ಷಣೆಗಾಗಿ ಪಿಐ ಶಶಿಧರ್‌ ಯೋಗಾನಂದ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ | ಶೋಪಿಯಾನ್​ನಲ್ಲಿ ಮುಂಜಾನೆಯಿಂದಲೂ ಎನ್​ಕೌಂಟರ್​; ಜೈಷ್​ ಎ ಮೊಹಮ್ಮದ್​ ಸಂಘಟನೆಯ ಉಗ್ರನ ಹತ್ಯೆ

Exit mobile version