Site icon Vistara News

Murder | ಚಾಕುವಿನಿಂದ ಇರಿದು ಪಾಗಲ್ ಪ್ರೇಮಿಯಿಂದ ನವವಿವಾಹಿತೆಯ ಬರ್ಬರ ಕೊಲೆ

Murder

ಬೆಂಗಳೂರು : ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಪ್ರೀತಿ ನಿರಾಕರಿಸಿ ಬೇರೊಬ್ಬನ ಜತೆ ವಿವಾಹವಾದ ನವವಿವಾಹಿತೆಯನ್ನು ಪಾಗಲ್‌ ಪ್ರೇಮಿ ಬರ್ಬರವಾಗಿ ಕೊಲೆ (Murder) ಮಾಡಿದ್ದಾನೆ. ಎರಡು ಚಾಕುವಿನಿಂದ ಇರಿದು ಗೃಹಿಣಿಯನ್ನು ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ.

ಸೌಮ್ಯ (23) ಕೊಲೆಯಾದ ನವವಿವಾಹಿತೆಯಾಗಿದ್ದಾರೆ. ಈಕೆಯನ್ನು ಪ್ರೀತಿಸುತ್ತಿದ್ದ ಪಾಗಲ್ ಪ್ರೇಮಿ ಸುಬ್ರಹ್ಮಣ್ಯ ಎಂಬಾತನಿಂದ ಈ ಕೃತ್ಯ ನಡೆದಿದೆ. ಕೊಲೆಯಾದ ಸೌಮ್ಯ ಬೆಂಗಳೂರಿನ ನಾಗವಾರದಲ್ಲಿ ಕಾಪಿ ಡೇಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಆರೋಪಿ ಸುಬ್ರಹ್ಮಣ್ಯ ಸೌಮ್ಯಳನ್ನು ಪ್ರೀತಿಸುತ್ತಿದ್ದ.

ಕೆಲ ತಿಂಗಳ ಹಿಂದೆ ಮೃತ ಸೌಮ್ಯ‌ ಕೆಲಸ ಬಿಟ್ಟಿದ್ದರು. ಹದಿನೈದು ದಿನಗಳ ಹಿಂದೆ ಸೌಮ್ಯ ಬೇರೊಬ್ಬರ ಜತೆ ಮದುವೆಯಾಗಿದ್ದರು. ಇದರಿಂದ ನೊಂದ ಪಾಗಲ್ ಪ್ರೇಮಿ ಕಳೆದ ರಾತ್ರಿ ಸೌಮ್ಯ ಹುಟ್ಟೂರಿಗೆ ಬಂದಿರುವುದು ನೋಡಿದ್ದ. ರಾತ್ರಿ ಗಣೇಶನ ಪೂಜೆಗೆಂದು ಮನೆಯವರು ಹೋಗಿದ್ದರು. ಈ ವೇಳೆ ಮನೆಯಲ್ಲಿ ನವ ವಿವಾಹಿತೆ ಸೌಮ್ಯ ಮಾತ್ರ ಇದ್ದಿದ್ದರು. ಇದೇ ಸರಿಯಾದ ಸಮಯ ಎಂದು ಸುಬ್ರಹ್ಮಣ್ಯ ಮನೆಯೊಳಗೆ ನುಗ್ಗಿ ಎರಡು ಚಾಕುವಿನಿಂದ ಸೌಮ್ಯಳಿಗೆ ಇರಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ | ಉಡುಪಿಯಲ್ಲಿ ಪ್ರೇಮಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್‌: ಕೊಲೆಯಾಗಿರುವ ಶಂಕೆ

ಮನೆಯವರು ಬರುತ್ತಿದ್ದಂತೆ ಹಿಂಬಾಗಿಲಿನಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೌಮ್ಯಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.

Exit mobile version