Site icon Vistara News

Bangalore underworld | ಬೆಂಗಳೂರಿನಲ್ಲಿ ಆಂಧ್ರಪ್ರದೇಶದ ರೌಡಿಗಳ ಗನ್‌ಫೈರ್‌, ಹಳೆ ಕೊಲೆಗಳ ಹಿನ್ನೆಲೆ?

bangalore underworld

ಬೆಂಗಳೂರು: ಆಂಧ್ರಪ್ರದೇಶದ ರೌಡಿಶೀಟರ್ ಶಿವಾರೆಡ್ಡಿ ಮೇಲೆ ಬೆಂಗಳೂರಿನಲ್ಲಿ ನಿನ್ನೆ ಗುಂಡಿನ ದಾಳಿ ನಡೆದಿದ್ದು, ಆರೋಪಿಗಳು ಬೈಕಿನಲ್ಲಿ ಬಂದು ದಾಳಿ ನಡೆಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಪತ್ತೆಯಾಗಿದೆ.

ನಿನ್ನೆ ಮೂರು ಗಂಟೆಯ ಸಂದರ್ಭದಲ್ಲಿ ಶಿವಾರೆಡ್ಡಿ ಮೇಲೆ ಆಗಂತುಕರು ಗನ್ ಫೈರ್ ಮಾಡಿದ್ದರು. ಆರೋಪಿಗಳು ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಬೈಕಿನಲ್ಲಿ ಬಂದ ಆರೋಪಿಗಳು ಶಿವಾರೆಡ್ಡಿ ಮೇಲೆ ಗುಂಡೆಸೆದು ಪರಾರಿಯಾಗಿದ್ದಾರೆ. ಕೆ.ಆರ್ ಪುರಂ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ.

ರೌಡಿ ಶಿವಾರೆಡ್ಡಿ ಮೇಲೆ ಗುಂಡಿನ ದಾಳಿಯ ಹಿಂದೆ ಕುಟುಂಬದ ಇತರ ಹತ್ಯೆಗಳ ರಿವೆಂಜ್ ಹಿನ್ನೆಲೆ ಇದೆ ಎಂದು ಶಂಕಿಸಲಾಗಿದೆ. ರೌಡಿ ಶಿವಾರೆಡ್ಡಿ ತಂದೆಯನ್ನು ಸಂಬಂಧಿಕರು 2011ರಲ್ಲಿ ಕೊಲೆ ಮಾಡಿದ್ದಾರೆ. ತಂದೆಯನ್ನು ಕೊಲೆ ಮಾಡಿದ್ದಕ್ಕೆ ಪ್ರತೀಕಾರವಾಗಿ, ಎದುರಾಳಿ ಗ್ಯಾಂಗ್‌ನಲ್ಲಿದ್ದ ಮೂವರನ್ನು ಶಿವಾರೆಡ್ಡಿ ಕೊಲೆ ಮಾಡಿಸಿದ್ದಾನೆ. ಈ ಎದುರಾಳಿಗಳ ಸಂಬಂಧಿಕರ ತಂಡವೇ ಈಗ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈಗಾಲೇ ಮೂರು ತಂಡಗಳನ್ನು ಮಾಡಿರುವ ಪೊಲೀಸರು ಮದನಪಲ್ಲಿ ಸೇರಿದಂತೆ ಹಲವಡೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ | Criminal politics | ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್‌ ಜತೆಗೂ ಸೈಲೆಂಟ್‌ ಸ್ನೇಹ, ಹೆಗಲ ಮೇಲೆ ಕೈಹಾಕಿದ ರೌಡಿ ಸತೀಶ!

Exit mobile version