Site icon Vistara News

ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಉದ್ಯಮಿ ಮೋಹನ್‌ದಾಸ್‌ ಪೈ

Bommai meets pai

ಬೆಂಗಳೂರು: ಇನ್ಫೋಸಿಸ್‌ ಸಹ ಸಂಸ್ಥಾಪಕ, ಉದ್ಯಮಿ ಮೋಹನ್‌ದಾಸ್‌ ಪೈ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರ ಭೇಟಿ ಮಾಡಿದರು.

ರೇಸ್‌ವ್ಯೂ ಸರ್ಕಾರಿ ನಿವಾಸದಲ್ಲಿ ಪೈ ಅವರೊಂದಿಗೆ ಸಿಎಂ ಬೊಮ್ಮಾಯಿ ಅವರು ಕೆಲಹೊತ್ತು ಚರ್ಚೆ ನಡೆಸಿದರು.

ಬೆಂಗಳೂರಿನಲ್ಲಿ ಮಳೆಯಿಂದ ಇತ್ತೀಚೆಗೆ ಅನಾಹುತ ಸಂಭವಿಸಿದಾಗ ಟ್ವೀಟ್‌ ಮಾಡಿದ್ದ ಮೋಹನ್‌ದಾಸ್‌ ಪೈ, ಇದರಿಂದ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ ಆಗುತ್ತಿದೆ ಎಂದಿದ್ದರು.

ಇದೇ ಸಂದರ್ಭವನ್ನು ಬಳಸಿಕೊಳ್ಳಲು ಮುಂದಾಗಿದ್ದ ತೆಲಂಗಾಣ ಸಚಿವ ಕೆ.ಟಿ. ರಾಮರಾವ್‌, ಹೈದರಾಬಾದ್‌ಗೆ ಉದ್ಯಮಿಗಳು ಆಗಮಿಸುವಂತೆ ಆಹ್ವಾನ ನೀಡಿದ್ದರು.

ಮೋಹನ್‌ದಾಸ್‌ ಪೈ ಅವರ ಕುರಿತು ಸರ್ಕಾರದ ಕೆಲ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರಾದರೂ, ಪೈ ಅವರು ಉತ್ತಮ ಉದ್ದೇಶದಿಂದಲೇ ಟ್ವೀಟ್‌ ಮಾಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದರು.

ಇದನ್ನೂ ಓದಿ | ಬೆಂಗಳೂರಲ್ಲಿ ಮೂಲಸೌಕರ್ಯ ಸರಿಯಾಗಿಲ್ಲೆಂದು ಮತ್ತೊಮ್ಮೆ ಹೇಳಿದ ತೆಲಂಗಾಣ ಸಚಿವ ಕೆಟಿಆರ್‌

Exit mobile version