Site icon Vistara News

Murder Case | ಯುವತಿಯ ಕತ್ತು ಕುಯ್ದು ಕೊಂದ ವಿವಾಹಿತ ಪಾಗಲ್‌ ಪ್ರೇಮಿ

Rashi murder

ಬೆಂಗಳೂರು: ಬಿಎ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿ ನಿರಾಕರಿಸಿದ್ದಕ್ಕೆ ಆಂಧ್ರಪ್ರದೇಶ ಮೂಲದ ಪಾಗಲ್‌ ಪ್ರೇಮಿಯೊಬ್ಬ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಬೆಂಗಳೂರಿನ ಹೊರವಲಯದ ರಾಜಾನುಕುಂಟೆಯ ಸಮೀಪದ ಶಾನುಭೋಗನಹಳ್ಳಿ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಯಲಹಂಕದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ರಾಶಿ (19) ಕೊಲೆಯಾದ ಕಾಲೇಜು ವಿದ್ಯಾರ್ಥಿನಿ. ಆಂಧ್ರ ಮೂಲದ ಮಧುಚಂದ್ರ ಎಂಬಾತ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.

ನಿನ್ನೆ ಸಂಜೆ ತಮ್ಮ ತೋಟದಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಮನೆಗೆ ಕರೆತರಲು ರಾಶಿ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಈ ಹಿಂದೆ ಮಧುಚಂದ್ರ ಆಕೆಯಲ್ಲಿ ತನ್ನ ಪ್ರೀತಿ ತೋಡಿಕೊಂಡಿದ್ದ. ಆದರೆ ಆತನಿಗೆ ಮೊದಲೇ ವಿವಾಹವಾಗಿದ್ದ ವಿಚಾರ ಗೊತ್ತಾಗಿದ್ದರಿಂದ ಆಕೆ ದೂರ ಸರಿದಿದ್ದಳು. ಇದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು.

ಇದನ್ನೂ ಓದಿ | Murder Case : ಕುಡಿದ ಅಮಲಿನಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯ ಕೊಲೆ; ಆರೋಪಿ ಸೆರೆ

ಪ್ರತಿನಿತ್ಯ ಕಾಲೇಜು ಮುಗಿದ ಬಳಿಕ ತೋಟದಲ್ಲಿನ ಹಸು, ಕುರಿ ಕರೆತರಲು ರಾಶಿ ತೆರಳುತ್ತಿದ್ದುದು ಗೊತ್ತಿದ್ದ ಆರೋಪಿ ಬೈಕ್‌ನಲ್ಲಿ ಆಕೆಯನ್ನು ಹಿಂಬಾಲಿಸಿದ್ದ. ನಿರ್ಜನ ಪ್ರದೇಶದಲ್ಲಿ ಆಕೆಯ ಜತೆ ವಾಗ್ವಾದ ಉಂಟಾಗಿದ್ದು, ನಂತರ ಆಕೆಯ ಕತ್ತು ಕೊಯ್ದು ಪರಾರಿಯಾಗಿದ್ದ. ಪ್ರಾಣ ಉಳಿಸಿಕೊಳ್ಳಲು ಕುಯ್ದ ಕತ್ತನ್ನು ಕೈಯಲ್ಲಿ ಹಿಡಿದುಕೊಂಡು ಸುಮಾರು 200 ಮೀಟ‌ರ್‌ನಷ್ಟು ದೂರ ರಾಶಿ ನಡೆದುಕೊಂಡು ಬಂದಿದ್ದಳು. ತೋಟದಲ್ಲಿ ಬಿದ್ದಿದ್ದ ರಾಶಿ ಮೃತದೇಹ ಕಂಡ ದಾರಿಹೋಕರು ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದರು. ರಾಜಾನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder case | ಯುವತಿಯನ್ನು ಭೀಕರವಾಗಿ ಹತ್ಯೆಗೈದ ಪಾತಕಿ ಶವವಾಗಿ ಪತ್ತೆ

Exit mobile version