Site icon Vistara News

ಪೊಲೀಸರಿಗೆ ಪೆಪ್ಪರ್‌ ಸ್ಪ್ರೇ, ಹಲ್ಲೆ ಮಾಡಿ ರೌಡಿಶೀಟರ್‌ ಎಸ್ಕೇಪ್‌; ಹಿಡಿಯಲು ಯತ್ನಿಸಿದ ಕಾನ್‌ಸ್ಟೆಬಲ್‌ಗೆ ಡ್ಯಾಗರ್‌ನಿಂದ ಇರಿತ

ಪೆಪ್ಪರ್‌ ಸ್ಪ್ರೇ

ಬೆಂಗಳೂರು: ಸರಗಳ್ಳತ‌ನ ಪ್ರಕರಣದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಹಾಡಹಗಲೇ ಪೊಲೀಸರ ಮೇಲೆ ಆರೋಪಿ ಪೆಪ್ಪರ್ ಸ್ಪ್ರೇ ಹಾಗೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಮಹಿಳಾ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ಮಾಡಿ, ಪುರುಷ ಕಾನ್‌ಸ್ಟೆಬಲ್‌ಗೆ ಡ್ಯಾಗರ್‌ನಿಂದ ಇರಿದು ರೌಡಿಶೀಟರ್‌ ತಪ್ಪಿಸಿಕೊಂಡಿದ್ದಾನೆ.

ರೌಡಿಶೀಟರ್ ವಿಜಯ್ ಅಲಿಯಾಸ್ ಗೊಣ್ಣೆ ವಿಜಿ ಪೊಲೀಸರಿಗೆ ಪೆಪ್ಪರ್ ಸ್ಪ್ರೇ ಹಾಗೂ ಹಲ್ಲೆ ಮಾಡಿದ ಆರೋಪಿ. ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ರೌಡಿಶೀಟರ್ ಗೊಣ್ಣೆ ವಿಜಿ, ಇತ್ತೀಚೆಗೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತ‌ನ ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಶುಕ್ರವಾರ ಸಂಜೆ ಬೀಟ್‌ನಲ್ಲಿದ್ದಾಗ ಆರೋಪಿ ಗಿರಿನಗರ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾನೆ. ಆತನನ್ನು ಗುರುತು ಹಿಡಿದು ಮಹಿಳಾ ಕಾನ್‌ಸ್ಟೆಬಲ್ ಮತ್ತು ಮತ್ತೊಬ್ಬ ಸಿಬ್ಬಂದಿ ಬೆನ್ನಟ್ಟಿದಾಗ ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಗೂ ಹಲ್ಲೆ ಮಾಡಿ, ಕಾನ್‌ಸ್ಟೆಬಲ್‌ ಕಿರಣ್‌ಗೆ ಡ್ಯಾಗರ್‌ನಿಂದ ಇರಿದಿದ್ದಾನೆ. ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೆರೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ | ಸಿಲಿಂಡರ್ ಸ್ಫೋಟಗೊಂಡು ಯುವಕ ಸಾವು; ಟೀ ಮಾಡಲು ಹೋಗಿದ್ದಾಗ ದುರಂತ

Exit mobile version