Site icon Vistara News

ದಿವಂಗತ ಡಾನ್ ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಮತ್ತೆ ವೈರ ಸ್ಫೋಟ

muthappa rai

ಮುತ್ತಪ್ಪ ರೈ, ಮನ್ಮಿತ್‌ ರೈ, ಗುಣರಂಜನ್‌ ಶೆಟ್ಟಿ

ಬೆಂಗಳೂರು: ದಿವಂಗತ ಭೂಗತ ಡಾನ್ ಮುತ್ತಪ್ಪ ರೈ ಅವರ ಅಪ್ತ ಬಳಗದಲ್ಲಿ ಮತ್ತೆ ವೈರ ಸ್ಫೋಟಗೊಂಡಿದೆ. ಗುಣರಂಜನ್‌ ಶೆಟ್ಟಿ ಹಾಗೂ ಮನ್ಮಿತ್‌ ರೈ ಎಂಬ ಇಬ್ಬರು ಮುತ್ತಪ್ಪ ರೈ ಒಡನಾಡಿಗಳು ಈಗ ಪರಸ್ಪರ ಘರ್ಷಣೆಗೆ ಕಾರಣರಾಗಿದ್ದಾರೆ.

ಮುತ್ತಪ್ಪ ರೈ ಬದುಕಿದ್ದಾಗ ಗುಣರಂಜನ್ ಶೆಟ್ಟಿ ಹಾಗೂ ಮನ್ಮಿತ್ ರೈ ಇಬ್ಬರೂ ಆವರ ಜೊತೆಗೆ ಇದ್ದವರು. ಇದೀಗ, ಮನಿತ್‌ ರೈ ಕಡೆಯಿಂದ ತನಗೆ ಕೊಲೆ ಬೆದರಿಕೆ ಇದೆ ಎಂದು ಪೊಲೀಸ್ ಇಲಾಖೆ ಹೇಳಿದೆ ಎಂದು ಗುಣರಂಜನ್ ಶೆಟ್ಟಿ ಹೇಳುತ್ತಿದ್ದಾರೆ. ಈ ಗುಣರಂಜನ್‌ ಶೆಟ್ಟಿ ಜಯಕರ್ನಾಟಕ ಸಂಘಟನೆಯ ಪ್ರಮುಖರಲ್ಲಿ ಒಬ್ಬ ಹಾಗೂ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ.

ಆದರೆ ಈ ವಿಚಾರವನ್ನು ಮನ್ಮಿತ್‌ ರೈ ನಿರಾಕರಿಸಿದ್ದಾರೆ. ತಾನು ವಿದೇಶದಲ್ಲಿದ್ದೇನೆ. ಬ್ಯುಸಿನೆಸ್ ವಿಚಾರವಾಗಿ ವಿದೇಶಕ್ಕೆ ಬಂದಿದ್ದೇನೆ, ಯಾವುದೇ ಕೊಲೆ ಸ್ಕೆಚ್‌ ವಿಚಾರ ತನಗೆ ತಿಳಿಯದು ಎಂದು ಮನ್ಮಿತ್ ರೈ ಹೇಳಿದ್ದಾರೆ. ಮುತ್ತಪ್ಪ ರೈ ಹತ್ತಿರದ ಸಂಬಂಧಿಯಾಗಿರುವ ಮನ್ಮಿತ್ ರೈ, ನಂತರ ಮುತ್ತಪ್ಪ ರೈ ಜೊತೆಯಿಂದ ಹೊರಬಂದಿದ್ದರು.

ಈ ಹಿಂದೆಯೂ ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಹಲವು ಬಾರಿ ವೈಷಮ್ಯ ಭುಗಿಲೆದ್ದಿತ್ತು. ಕೊಲೆಗೆ ಸ್ಕೆಚ್ ಇದೆ ಎಂಬ ವಿಚಾರವನ್ನು ಇದುವರೆಗೂ ಪೊಲೀಸ್ ಇಲಾಖೆ ಖಚಿತಪಡಿಸಿಲ್ಲ.

ಇದನ್ನೂ ಓದಿ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ, ಅಂಥದ್ದೇನಾಯ್ತು?

Exit mobile version