Site icon Vistara News

Suicide | ತಂದೆ-ತಾಯಿಯನ್ನು ಮನೆಯಲ್ಲಿರಿಸಿಕೊಳ್ಳಲು ಒಪ್ಪದ ಪತ್ನಿ: ಮನನೊಂದ ಅಮ್ಮ-ಮಗ ಆತ್ಮಹತ್ಯೆ

hang

ಬೆಂಗಳೂರು: ವಯಸ್ಸಾದ ಅಮ್ಮನನ್ನು ತನ್ನ ಮನೆಯಲ್ಲೇ ಇರಿಸಿಕೊಳ್ಳಲು ಆತ ಊರಿನಿಂದ ಕರೆ ತಂದಿದ್ದ. ಆದರೆ ಇದಕ್ಕೆ ಪತ್ನಿ ಆಕ್ಷೇಪ ವ್ಯಕ್ತಪಡಿಸಿ ಕಿರಿಕಿರಿ ಶುರು ಮಾಡಿದ್ದಳು. ಇದರಿಂದ ಮನನೊಂದ ತಾಯಿ ಮತ್ತು ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀನಿವಾಸ್ (33) ಹಾಗೂ ಭಾಗ್ಯಮ್ಮ(57) ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮೃತ ಶ್ರೀನಿವಾಸ್‌

ಮೂಲತಃ ಮಡಿಕೇರಿ ಮೂಲದ ಶ್ರೀನಿವಾಸ್ ಬೆಂಗಳೂರಿನಲ್ಲಿ ವಾಸವಾಗಿದ್ದ. ತಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ‌ಹಾಸಿಗೆ ಹಿಡಿದಿದ್ದರು. ಹೀಗಾಗಿ ಕೆಲ ದಿನಗಳ ಹಿಂದಷ್ಟೆ ತಂದೆ-ತಾಯಿಯನ್ನು ಊರಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ವಯಸ್ಸಾದ ಕಾರಣ ಜತೆಯಲ್ಲಿಯೇ ಇರಿಸಿಕೊಂಡು ನೋಡಿಕೊಳ್ಳಲು ಬಯಸಿದ್ದ. ಆದರೆ ಈ ವಿಚಾರವಾಗಿ ಶ್ರೀನಿವಾಸ್ ಪತ್ನಿ ಜಗಳ ತೆಗೆದಿದ್ದಳು.

ಊರಲ್ಲಿದ್ದ ತಂದೆ-ತಾಯಿಯನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇಕೆ ಎಂದು ಪ್ರಶ್ನಿಸಲಾರಂಭಿಸಿದ್ದಳು.‌ ಅತ್ತೆ- ಮಾವನನ್ನು ನೋಡಿಕೊಳ್ಳಲು ಕಷ್ಟವಾಗಲಿದೆ ಎಂದು ಗಲಾಟೆ ಮಾಡಿದ್ದಳು. ಈ ಕಾರಣದಿಂದ ಬೇಸತ್ತಿದ್ದ ಶ್ರೀನಿವಾಸ ಮತ್ತು ಭಾಗ್ಯಮ್ಮ ಮನೆಯ ಕೋಣೆಯಲ್ಲಿ ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಮಧ್ಯಾಹ್ನದ ತನಕ ರೂಮಿನ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾಜಗೋಪಾಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Murder Mystery | ಗಂಡನಿಗೆ ಲೈಂಗಿಕ ಆಸಕ್ತಿ ಇಲ್ಲ ಎಂದು ಪ್ರಿಯಕರನ ಜತೆ ಸೇರಿ ಕೊಂದಳು! ವಯಸ್ಸು ಆಕೆಗೆ 42, ಗಂಡನಿಗೆ 60, ಪ್ರಿಯಕರನಿಗೆ 28!

Exit mobile version