Site icon Vistara News

Bigg Boss Kannada | ಬಿಗ್‌ ಹೌಸ್‌ನಲ್ಲಿ ರೂಪೇಶ್‌ ಶೆಟ್ಟಿ, ಜಯಶ್ರೀ ಆರಾಧ್ಯ ನಡುವೆ ಕಿರಿಕ್‌!

Bigg Boss Kannada

ಬೆಂಗಳೂರು: ಒಟಿಟಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಿಗ್‌ ಬಾಸ್‌ ಕನ್ನಡ (Bigg Boss Kannada) ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮನೆಯ ಸದಸ್ಯರ ಮಧ್ಯೆ ಸಣ್ಣ ವಾರ್‌ ಶುರುವಾಗಿದೆ. ಜಯಶ್ರೀ ಆರಾಧ್ಯ ಮಾತಿಗೆ ರೇಡಿಯೋ ಜಾಕಿ ರೂಪೇಶ್‌ ಶೆಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ. ಇಬ್ಬರ ನಡುವೆ ದೊಡ್ಡ ಮನೆಯಲ್ಲಿ ಸಣ್ಣ ಜಗಳ ಎದ್ದಿದೆ.

ಬಿಗ್‌ ಬಾಸ್‌ ನೀಡಿದ್ದ ಗೇಮ್‌ನಲ್ಲಿ ರೂಪೇಶ್‌ ಹಾಗೂ ಜಯಶ್ರೀ ನಡುವೆ ಸೋಲು ಗೆಲುವಿನ ವಾರ್‌ ನಡೆದಿದ್ದು, ಈ ಮಧ್ಯೆ ಜಯಶ್ರೀ ನೀನೇನು ಗೆದ್ದಬುಟ್ಟ ಎಂದಿದ್ದಾರೆ. ಇದಕ್ಕೆ ಬೇಸರಕೊಂಡ ರೂಪೇಶ್‌, ಜಯಶ್ರೀ ಪದಬಳಕೆ ಸರಿಯಿಲ್ಲ ಎಂದಿದ್ದಾರೆ.

ರೂಪೇಶ್‌ ಶೆಟ್ಟಿVs ಜಯಶ್ರೀ ಆರಾಧ್ಯ

ಡ್ರೆಸಿಂಗ್‌ ರೂಮಿನಲ್ಲಿ ನಡೆದ ಇವರಿಬ್ಬರ ಸಂಭಾಷಣೆಯಲ್ಲಿ ನನಗೆ ಅನ್ನಿಸಿದನ್ನು ನಾನು ಹೇಳಿದ್ದೆ ಎಂದ ಜಯಶ್ರೀ, ನೀನೇನು ಗೆದ್ದಬುಟ್ಟ ಎಂದಷ್ಟೇ ಹೇಳಿದ್ದೇನೆ. ಆ ಪದದಲ್ಲಿ ಕೆಟ್ಟದ್ದು ಏನಿದೆ? ಕೆಟ್ಟದಾಗಿ ನಾನು ಏನೂ ಹೇಳಿಲ್ಲ ಎಂದು ವಾದಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ಕೊಟ್ಟ ರೂಪೇಶ್‌, ಮಾತಾಡುವವರಿಗೆ ಕೇಳಿಸಿಕೊಳ್ಳುವ ವ್ಯವಧಾನವೂ ಇರಬೇಕು. ನಿಮ್ಮ ಮಾತಿನಿಂದ ಬೇಜಾರು ಆಗಲಿಲ್ಲ. ಆದರೆ ಬಳಸಿದ ಪದಬಳಕೆ ಇಷ್ಟ ಆಗಲಿಲ್ಲ. ಟೀಮ್ ಗೆಲ್ಲಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ‌ಕಲಹಕ್ಕೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ | Bigg Boss Kannada | ಈ ಬಾರಿ ಬಿಗ್ ಬಾಸ್ ಒಟಿಟಿ ಮಸ್ತಿ ಇಲ್ಲ; ನೋಡಲು ಟೈಮ್ ಇಲ್ಲ ಎಂದ ನೆಟ್ಟಿಗರು!

Exit mobile version