Site icon Vistara News

Bike Accident | ಭಿಕ್ಷುಕನಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಬೈಕ್‌: ವೃದ್ಧ, ಸವಾರ ಇಬ್ಬರೂ ಮೃತ್ಯು

accident

ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ಸಂಗಾಪುರ ಬಳಿ ನಡೆದ ಬೈಕ್‌ ಅಪಘಾತದಲ್ಲಿ (Bike Accident) ಸವಾರ ಮತ್ತು ಭಿಕ್ಷುಕ ಪ್ರಾಣ ಕಳೆದುಕೊಂಡಿದ್ದಾರೆ. ಶನಿವಾರ ರಾತ್ರಿ ಮಂಜುನಾಥ್‌ ಎಂಬುವವರು ಸಂಗಾಪುರಕ್ಕೆ ಬೈಕ್‌ನಲ್ಲಿ ಬರುವಾಗ, ರಸ್ತೆಯಲ್ಲಿ ಮಲಗಿದ್ದ ಭಿಕ್ಷುಕನ ಮೇಲೆ ಬೈಕ್‌ ಹರಿದಿದೆ. ಏಕಾಏಕಿ ನಡೆದ ಘಟನೆಯಿಂದ ಕಕ್ಕಾಬಿಕ್ಕಿಯಾದ ಸವಾರ ನಿಯಂತ್ರಣ ತಪ್ಪಿದ್ದಾರೆ. ಬೈಕ್‌ ಪಲ್ಟಿಯಾಗಿ ಸವಾರನೂ ನೆಲಕ್ಕೆ ಉರುಳಿದ್ದಾರೆ.

ಅಪಘಾತದಲ್ಲಿ ಬೈಕ್ ಸವಾರ ಮಂಜುನಾಥ ಸ್ಥಳದಲ್ಲೇ ಮೃತಪಟ್ಟರೆ, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೃದ್ಧ ಭಿಕ್ಷುಕನನ್ನು ಗಂಗಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಭಿಕ್ಷುಕನೂ ಮೃತಪಟ್ಟಿದ್ದಾರೆ. ಗಂಗಾವತಿ ಗ್ರಾಮೀಣಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ | ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಆಸ್ಪತ್ರೆಗೆ ಸಾಗಿಸಿದ ಶಾಸಕ ಹರತಾಳು ಹಾಲಪ್ಪ; ಸಾರ್ವಜನಿಕರ ಪ್ರಶಂಸೆ

Exit mobile version