Site icon Vistara News

BJP ಜನಸ್ಪಂದನ | ಯುವ ಮುಖಂಡ, ಎಂಎಲ್‌ಎ ಟಿಕೆಟ್‌ ಆಕಾಂಕ್ಷಿ ಧೀರಜ್‌ ಮುನಿರಾಜ್ ಮನೇಲಿ ನಾಯಕರಿಗೆ ಟಿಫಿನ್‌

Dheeraj muniraju house

ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ ಬಹುತೇಕ ಎಲ್ಲ ನಾಯಕರಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನು ಮಾಡಿದ್ದು ಇಲ್ಲಿನ ಬಿಜೆಪಿ ಯುವ ಮುಖಂಡ ಧೀರಜ್‌ ಮುನಿರಾಜ್‌ ಅವರ ಮನೆಯಲ್ಲಿ.

ಬಿ.ಎಸ್.ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಉಪಾಹಾರ ಸೇವಿಸಿ ಅಲ್ಲಿಂದ ತೆರಳಿದರು. ಧೀರಜ್‌ ಮುನಿರಾಜ್‌ ಅವರು ಇಲ್ಲಿ ಪ್ರಮುಖ ಬಿಜೆಪಿ ನಾಯಕರಾಗಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿರ ಆರ್.ಅಶೋಕ್ ಒಂದೇ ಸೋಪಾದಲ್ಲಿ ಕುಳಿತು ಕಾಫಿ ಸೇವಿಸಿದರೆ ಪಕ್ಕದ ಸೋಫಾದಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಕುಳಿತಿದ್ದರು.

ದೊಡ್ಡಬಳ್ಳಾಪುರದ ಪಿಎಸ್ಐ ಜಗದೀಶ್ ವೃತ್ತದ ಅರ್ಕಾವತಿ ಬಡಾವಣೆಯಲ್ಲಿ ಧೀರಜ್‌ ಅವರ ಮನೆ ಇದೆ. ಬಿ.ವೈ. ವಿಜಯೇಂದ್ರ, ಲಕ್ಷ್ಮಣ ಸವದಿ, ಬಿ.ಸಿ. ನಾಗೇಶ್‌ ಸೇರಿದಂತೆ ಎಲ್ಲ ನಾಯಕರು ಮನೆಗೆ ಬಂದಿದ್ದರು. ಸಿಹಿ ಖಾದ್ಯ ಸೇವಿಸಿ ಖುಷಿಪಟ್ಟರು.

ಇದನ್ನೂ ಓದಿ| BJP ಜನಸ್ಪಂದನ | ದೊಡ್ಡಬಳ್ಳಾಪುರದಿಂದ ಒಂದೇ ಕಾರಿನಲ್ಲಿ ಹೊರಟ ನಾಯಕರು, ಬಿಎಸ್‌ವೈಗೆ ಫ್ರಂಟ್‌ ಸೀಟ್‌ ಕೊಟ್ಟ ಬೊಮ್ಮಾಯಿ

Exit mobile version