Site icon Vistara News

ಚಿತ್ರದುರ್ಗ: ಬಸ್‌ ಡಿಕ್ಕಿಯಾಗಿ ಹಳ್ಳಕ್ಕೆ ಉರುಳಿದ ತೈಲ ಟ್ಯಾಂಕರ್‌, ಚಾಲಕ ದುರ್ಮರಣ

accident chitradurga

ಚಿತ್ರದುರ್ಗ: ಇಲ್ಲಿನ ಜಿ.ಆರ್‌. ಹಳ್ಳಿ ಬಳಿ ಖಾಸಗಿ ಬಸ್‌ ಒಂದು ಡಿಕ್ಕಿ ಹೊಡೆದು ಟ್ಯಾಂಕರ್‌ ಕೆಳಗೆ ಉರುಳಿದೆ. ಬಸ್‌ ಡಿಕ್ಕಿಯ ಹೊಡೆತಕ್ಕೆ ಸಿಲುಕಿದ ಟ್ಯಾಂಕರ್‌ ಹೈವೇಯಿಂದ ತುಂಬಾ ಆಳದ ಹಳ್ಳಕ್ಕೆ ಬಿದ್ದಿದೆ. ಟ್ಯಾಂಕರ್‌ ಉರುಳುತ್ತಾ ಉರುಳುತ್ತಾ ಸಾಗಿದ್ದರಿಂದ ಅದರೊಳಗೆ ಸಿಲುಕಿದ ಚಾಲಕ ಪ್ರಾಣ ಬಿಟ್ಟಿದ್ದಾರೆ.

ಟ್ಯಾಂಕರ್‌ಗೆ ಡಿಕ್ಕಿ ಹೊಡದ ಬಸ್‌

ಮೃತ ಚಾಲಕನನ್ನು ಮಹ್ಮದ್ ಇಸ್ಮಾಯಿಲ್ (40) ಎಂದು ಗುರುತಿಸಲಾಗಿದೆ. ಚಿತ್ರದುರ್ಗ ತಾಲೂಕಿನ ಜಿ.ಆರ್.ಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಈ ಅಪಘಾತ ನಡೆದಿದೆ.

ರಾತ್ರಿ ನಿದ್ದೆಯ ಮಂಪರಿನಲ್ಲೋ, ಅತಿವೇಗ ಚಾಲನೆಯ ಕಾರಣಕ್ಕೋ ಖಾಸಗಿ ಬಸ್‌ ಈ ರೀತಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್ಸಿನ ಮುಂಭಾಗಕ್ಕೆ ತುಂಬ ಹಾನಿಯಾಗಿದೆ. ಆದರೆ, ಚಾಲಕನೂ ಸೇರಿದಂತೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident | ಸ್ಕೂಟರ್‌ಗೆ ಲಾರಿ ಡಿಕ್ಕಿ; ರಸ್ತೆ ಅಪಘಾತದಲ್ಲಿ ನವವಿವಾಹಿತೆ ಸಾವು

Exit mobile version