Site icon Vistara News

Murder Case: ಮಹಿಳೆ, ಇಬ್ಬರು ಮಕ್ಕಳು ಅನುಮಾನಾಸ್ಪದ ಸಾವು, ಪತಿ ನಾಪತ್ತೆ

triple murder gundlupet

ಚಾಮರಾಜನಗರ: ಮಹಿಳೆ ಹಾಗೂ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪತಿ ಹಾಗೂ ಆತನ ಹೆತ್ತವರು ನಾಪತ್ತೆಯಾಗಿರುವ ಪ್ರಕರಣ (murder case) ವರದಿಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಲಗಿರುವ ಸ್ಥಿತಿಯಲ್ಲಿ ಎಲ್ಲರ ಶವ ಪತ್ತೆಯಾಗಿದೆ. ಮೇಘಾ (24), ಪುನ್ವಿತಾ (6), ಮನ್ವಿತಾ (3) ಮೃತರು. ಮೂವರನ್ನೂ ಗಂಡನೇ ನೇಣು ಬಿಗಿದು ಗಂಡನೇ ಹತ್ಯೆಗೈದಿದ್ದಾನೆ (husband kills wife) ಎಂದು ಮೇಘಾ ಅವರ ಹೆತ್ತವರು ಆರೋಪಿಸಿದ್ದಾರೆ.

ಅಭಿ ಮೃತ ಮೇಘಾ ಅವರ ಪತಿ. ಮೇಘಾ ಮತ್ತು ಅಭಿ ಮದುವೆಯಾಗಿ ಎಂಟು ವರ್ಷವಾಗಿದೆ. ಈತ ಆರಂಭದಿಂದಲೂ ಮೇಘಾಗೆ ಚಿತ್ರಹಿಂಸೆ ನೀಡುತ್ತಿದ್ದ. ನಿನ್ನೆ ಗಲಾಟೆ ಮಾಡಿ ಮೂವರನ್ನೂ ನೇಣು ಹಾಕಿ ಸಾಯಿಸಿದ್ದಾನೆ ಎಂದು ಮೇಘ ತಂದೆ ಮಹೇಶ್ ಆರೋಪಿಸಿದ್ದಾರೆ. ಅಭಿ ಸೇರಿದಂತೆ ಆತನ ತಂದೆ ಹಾಗು ತಾಯಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ತೆರಕಣಾಂಬಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಗರ್ಭಿಣಿ ಪತ್ನಿಯನ್ನು ಸಾಯಿಸಿದ ಪತಿ

ಮೈಸೂರು: ಗರ್ಭಿಣಿ ಹೆಂಡತಿಯನ್ನು ಪಾಪಿ ಗಂಡ ಕುತ್ತಿಗೆ ಕೊಯ್ದು ಸಾಯಿಸಿದ ಘಟನೆ (husband kills wife) ನಂಜನಗೂಡಿನ ಚಾಮಲಾಪುರದಲ್ಲಿ ನಡೆದಿದೆ. ಶೋಭಾ (21) ಮೃತ ದುರ್ದೈವಿ.

8 ವರ್ಷದ ಹಿಂದೆ ಹಿಂದೆ ಮಂಜುನಾಥ್‌ನನ್ನು ಶೋಭಾ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ಮನೆಯಲ್ಲಿ ಕುಳಿತು ಮಾತನಾಡುವಾಗ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹರಿತವಾದ ಬ್ಲೇಡ್‌ನಿಂದ ಮಂಜುನಾಥ ಕುತ್ತಿಗೆಯನ್ನು ಕೊಯ್ದಿದ್ದಾನೆ. ಗರ್ಭಿಣಿಯಾಗಿದ್ದ ಶೋಭಾಗೆ ಮುಂದಿನ ವಾರ ವೈದ್ಯರು ಡೆಲಿವರಿ ಡೇಟ್ ಕೊಟ್ಟಿದ್ದರು. ತಾಯಿ ಹಾಗೂ ಗರ್ಭದಲ್ಲಿದ್ದ ಹಸುಗೂಸು ಮೃತಪಟ್ಟಿದ್ದಾರೆ. ನಂಜನಗೂಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ರಾಮದೇವರ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ; ಬಸ್‌ ಡಿಕ್ಕಿಯಾಗಿ ಸವಾರರಿಬ್ಬರ ದುರ್ಮರಣ

Exit mobile version