Site icon Vistara News

Crime News: ಆತ್ಮಹತ್ಯೆ ಮಾಡಿಕೊಂಡ ಅತ್ತೆ ಮಗಳಿಗೆ ನ್ಯಾಯ ಕೊಡಿಸಲು ಆತ್ಮಹತ್ಯೆಗೆ ಯತ್ನಿಸಿದ ಯುವಕ

sucide crime

ಚಿಕ್ಕಬಳ್ಳಾಪುರ: ತನ್ನ ಅತ್ತೆ ಮಗಳನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ, ಆತನಿಗೆ ಶಿಕ್ಷೆ ಕೊಡಿಸಿ ಆಕೆಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಯುವಕನೊಬ್ಬ ಚಿಕ್ಕಬಳ್ಳಾಪುರ ಆಸ್ಪತ್ರೆಯ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಚಿಕ್ಕಬಳ್ಳಾಪುರ ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಶವಗಾರದ ಎದುರೇ ಘಟನೆ ನಡೆದಿದೆ. ಗೌರಿಬಿದನೂರಿನ ಕಾಮಗಾನಹಳ್ಳಿ ಗ್ರಾಮದ ಯುವಕ ಮುರುಳಿ ಎಂಬಾತ ಹೀಗೆ ಮಾಡಿದ್ದಾನೆ.

ಈತನ ಅತ್ತೆಯ ಮಗಳಾದ ಪುಷ್ಪ ನಿನ್ನೆಯಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಪುಷ್ಪಳಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಗೊಂಡಿದ್ದ ಪತಿ ನಿತ್ಯ ಆಕೆಗೆ ಈ ಬಗ್ಗೆ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಪತಿ- ಪತ್ನಿ ನಡುವೆ ವೈಮನಸ್ಸು ಬಂದ ಹಿನ್ನೆಲೆಯಲ್ಲಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಳ ಪತಿ ಶ್ರೀನಿವಾಸನೇ ಕೊಲೆ ಮಾಡಿದ್ದಾನೆಂದು ಆಕೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಷ್ಪಾಳಿಗೆ ಆಕೆಯ ಪತಿ ಶ್ರೀನಿವಾಸ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಮುರುಳಿ, ಆಸ್ಪತ್ರೆ ಶವಾಗಾರದ ಮುಂದೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಗೌರಿಬಿದನೂರು ಸಿಪಿಐ ಲಕ್ಷ್ಮೀ ನಾರಾಯಣ ಅವರು ಸ್ಥಳಕ್ಕೆ ಬಂದು ಯುವಕನನ್ನು ಕೆಳಗಿಸಿದ್ದಾರೆ.

ಮಗಳ ಸಾವಿನ ಬಗ್ಗೆ ಮೃತಳ ತಾಯಿ ದೂರು ನೀಡಿದ್ದು, ಪೊಲೀಸರು ಆಕೆಯ ಪತಿ ಶ್ರೀನಿವಾಸನನ್ನು ಬಂಧಿಸಿದ್ದಾರೆ.

Exit mobile version