Site icon Vistara News

ದುರಸ್ತಿ ಮಾಡುವಾಗ ವಿದ್ಯುತ್ ಸ್ಪರ್ಶ; ಕಂಬದ ಮೇಲೆಯೇ ಲೈನ್‌ಮನ್ ಸಾವು

ಲೈನ್‌ಮನ್ ಸಾವು

ಚಿಕ್ಕೋಡಿ: ವಿದ್ಯುತ್ ಮಾರ್ಗ ದುರಸ್ತಿ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಲೈನ್‌ಮನ್ ಮೃತಪಟ್ಟಿದ್ದಾನೆ. ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ಭಾನುವಾರ ಅವಘಡ ನಡೆದಿದೆ.

ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (48) ಮೃತ. ಹೆಸ್ಕಾಂ ಸಹಾಯಕ ಲೈನ್‌ಮನ್ ಆಗಿ ಕೆಲಸ‌ ಮಾಡುತ್ತಿದ್ದರು. ಬೆಳಗ್ಗೆ ವಿದ್ಯುತ್ ಸಮಸ್ಯೆ ಉಂಟಾಗಿ ಲೈನ್‌ಮನ್ ಬಸವರಾಜ್ ಪಾಟೀಲ ಬದಲಾಗಿ ಕಂಬ ಏರಿ ವಿದ್ಯುತ್‌ ತಂತಿ ದುರಸ್ತಿಗೆ ಮುಂದಾಗಿದ್ದಾರೆ. ಎಲ್‌ಸಿ (ಲೈನ್ ಕ್ಲಿಯರ್) ಮಾಹಿತಿ ಪಡೆದು ವಿದ್ಯುತ್ ಕಂಬ ಏರಿದರೂ ಅವಘಡ ನಡೆದಿದ್ದು, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೃತರ ಕುಟುಂಬಸ್ಥರಿಗೆ ಪರಿಹಾರ ವಿತರಿಸುವವರೆಗೆ ಮೃತದೇಹವನ್ನು ಕಂಬದ ಮೇಲಿಂದ ತೆಗೆಯಬಾರದು ಎಂದು ಸಂಬಂಧಿಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಇದನ್ನೂ ಓದಿ | Firing Case | ಕೈಯಲ್ಲಿದ್ದ ನಾಡಬಂದೂಕು ಮಿಸ್‌ ಫೈರ್‌; ಗುಂಡು ಎದೆಗೆ ಹೊಕ್ಕಿ ರೈತ ಸಾವು

Exit mobile version