Site icon Vistara News

ಸಿಎಂ ಸಿದ್ದರಾಮಯ್ಯ ಬಾಸ್‌ ಎಂದು ಬಂಗಾರದಲ್ಲಿ ಬರೆಸಿದ ಅಭಿಮಾನಿ, ಸಿದ್ದು ಪ್ರತಿಕ್ರಿಯೆ ಏನಿತ್ತು?

siddu fan gold

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಯ ಪೈಪೋಟಿ ಮುಂದುವರಿಯುತ್ತಿರುವ ನಡುವೆಯೇ ಅಭಿಮಾನಿಯೊಬ್ಬರು ʻಸಿಎಂ ಸಿದ್ದರಾಮಯ್ಯ ಬಾಸ್‌ʼ ಎಂದು ಚಿನ್ನದಲ್ಲಿ ಬರೆಸಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನೋತ್ಸವ ಸಿದ್ದರಾಮಯ್ಯ- 75 ಅಮೃತ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಲೇ ಅಭಿಮಾನಿಗಳು ಶುಭಾಶಯ ಸಲ್ಲಿಸುತ್ತಿದ್ದಾರೆ. ಸೋಮವಾರ ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಕೆ.ಡಿ. ಗಣೇಶ್‌ ಎಂಬವರು ಬೆಂಗಳೂರಿಗೆ ಬಂದು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಉಡುಗೊರೆಯೊಂದನ್ನು ನೀಡಿದರು.

ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಭಾವಚಿತ್ರಗಳನ್ನು ಹೊಂದಿರುವ ಫೋಟೊ ಫ್ರೇಮ್‌ನ ಕೆಳಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಬಾಸ್‌ ಎಂದು ಬರೆಯಲಾಗಿದೆ. ಇದನ್ನು ೧೬ ಗ್ರಾಮ್‌ ಚಿನ್ನ ಬಳಸಿ ಬರೆದಿರುವುದು ವಿಶೇಷ.

ಚಿನ್ನದಲ್ಲಿ ಬರೆದಿರುವ ಬರಹ

ಮಾಜಿ ಅಂತ ಬರೆಸಬೇಕಿತ್ತು!
ಅಭಿಮಾನಿಯ ಉಡುಗೊರೆಯನ್ನು ಬಹಳ ಪ್ರೀತಿಯಿಂದಲೇ ಸ್ವೀಕರಿಸಿದ ಸಿದ್ದರಾಮಯ್ಯ ಅವರು ʻಹೇ.. ಎಕ್ಸ್‌ ಸಿಎಂʼ ಎಂದು ಬರೆಸಬೇಕಿತ್ತು ಎಂದು ಹೇಳಿದರು. ಆಗ ಗಣೇಶ್‌ ಸೇರಿದಂತೆ ಅಭಿಮಾನಿಗಳು, ʻʻಇರಲಿ ಅಣ್ಣ.. ನೀವು ಎವರ್ ಗ್ರೀನ್ ಸಿಎಂʼ ಎಂದರು. ಜತೆಗೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಎಂದು ಘೋಷಣೆ ಮೊಳಗಿಸಿದರು. ಸಿದ್ದರಾಮಯ್ಯ ಮುಗುಳ್ನಕ್ಕು ಮುನ್ನಡೆದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಯಾರು ಎಂಬ ವಿಚಾರದಲ್ಲಿ ಭಾರಿ ಚರ್ಚೆಯೇ ನಡೆಯುತ್ತಿದೆ. ಸಿದ್ದರಾಮಯ್ಯ ಅಭಿಮಾನಿಗಳು ಅವರೇ ಸಿಎಂ ಎಂದರೆ, ಡಿ.ಕೆ. ಶಿವಕುಮಾರ್‌ ಅವರೂ ಉತ್ಸುಕರಾಗಿದ್ದಾರೆ. ಈ ನಡುವೆ ಎಸ್‌.ಆರ್‌. ಪಾಟೀಲ್‌ ಯಾಕಾಗಬಾರದು ಎಂಬ ಪ್ರಶ್ನೆಯನ್ನು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಎತ್ತಿದ್ದಾರೆ.

ಇದನ್ನೂ ಓದಿ | ಸಿದ್ದರಾಮೋತ್ಸವ | ಸಿದ್ದರಾಮಯ್ಯಗೆ ವರವೋ? ಶಾಪವೋ?

Exit mobile version