Site icon Vistara News

Crime News | ದೊಡ್ಡಮ್ಮನ ಕಿವಿ ಕತ್ತರಿಸಿ ಓಲೆ ಕದ್ದ; ಕೊಲೆ ಮಾಡಿ ಪರಾರಿಯಾದ

Murder

ಹುಬ್ಬಳ್ಳಿ: ಇಲ್ಲಿನ ನೇಕಾರ ನಗರದಲ್ಲಿ ಚಿನ್ನಾಭರಣಕ್ಕಾಗಿ ದುಷ್ಟನೊಬ್ಬ ತನ್ನ ದೊಡ್ಡಮ್ಮನನ್ನೇ ಕೊಂದಿದ್ದು, (Crime News) ಕಿವಿಯನ್ನೇ ಕೊಯ್ದು ಓಲೆಯನ್ನು ಕೊಂಡೊಯ್ದಿದ್ದಾನೆ.

ಕಮಲಮ್ಮ (70) ಕೊಲೆಯಾದ ದುರ್ದೈವಿಯಾಗಿದ್ದು, ಕಲಘಟಗಿ ತಾಲೂಕಿನ ಗಂಬ್ಯಾಪುರ ನಿವಾಸಿ ಮಾಲತೇಶ ಕೊಲೆ ಆರೋಪಿಯಾಗಿದ್ದಾನೆ.

ಮಾಲತೇಶ ಕಮಲಮ್ಮನ ತಂಗಿಯ ಮಗನಾಗಿದ್ದಾನೆ. ಮೂರು ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ. ಈ ವೇಳೆ, ತನಗೆ ಕಷ್ಟವಿದೆ. ನೀನು ಧರಿಸಿರುವ ಚಿನ್ನಾಭರಣ ನೀಡು ಎಂದು ಕಮಲಮ್ಮ ಅವರನ್ನು ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಚಿನ್ನಾಭರಣ ನೀಡಲು ವೃದ್ಧೆ ಕಮಲಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ. ಕೊನೆಗೆ ಕುಪಿತಗೊಂಡ ಮಾಲತೇಶ ಕಮಲಮ್ಮನ ಕಿವಿ ಕತ್ತರಿಸಿ ಓಲೆ ಹಾಗೂ ಚಿನ್ನದ ಸರ ಕದ್ದಿದ್ದಾನೆ. ವಿಷಯ ತಿಳಿದರೆ ಎಂಬ ಭಯದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಮಾಲತೇಶ ವಿರುದ್ಧ ಕಮಲಮ್ಮ ಪುತ್ರ ಪ್ರಭಯ್ಯ ಕಸಬಾಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ | ಕಾಫಿರರನ್ನು ಕೊಲ್ಲಿ ಎಂದು ಕೂಗುತ್ತಾ ಕೊಚ್ಚಿದರು! ಹರ್ಷ ಕೊಲೆ ನಡೆದದ್ದು ಹೀಗೆ | ಇಲ್ಲಿದೆ ಸ್ಫೋಟಕ ವಿವರ

Exit mobile version