Site icon Vistara News

ಜೆಸಿಬಿ ಬಕೆಟ್‌ನಿಂದಲೇ ಬಾಲಕನ ಶವವನ್ನು ಪಕ್ಕಕ್ಕೆ ಸರಿಸಿದ ಕ್ರೂರಿ ಚಾಲಕ

boy death mangalore

ಮಂಗಳೂರು: ಮದ್ಯದ ನಶೆಯಲ್ಲಿದ್ದ ಜೆಸಿಬಿ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ಬಲಿಯಾದ ಘಟನೆ ವಿಟ್ಲ ಬಳಿ ನಡೆದಿದೆ. ಮೃತಪಟ್ಟ ಬಾಲಕನ ಶವವನ್ನು ಜೆಸಿಬಿ ಬಕೆಟ್‌ನಿಂದಲೇ(ಕೊಕ್ಕಿನಿಂದ) ಪಕ್ಕಕ್ಕೆ ಸರಿಸಿ ತೆರಳಿದ್ದ ಆ ಕ್ರೂರಿ ಚಾಲಕ.

ಬಂಟ್ವಾಳ ತಾಲೂಕು ಕನ್ಯಾನದ ಕಣಿಯೂರು ನಿವಾಸಿ ಹಸೈನಾರ್‌ ಎಂಬವರ ಪುತ್ರ ಮಹಮ್ಮದ್‌ ಅಖಿಲ್‌ (8) ಸೈಕಲ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಕನ್ಯಾನದ ಉದ್ಯಮಿಯೊಬ್ಬರ ಮನೆಗೆ ಹೋಗುತ್ತಿದ್ದ ಜೆಸಿಬಿ ಅಖಿಲ್‌ಗೆ ಡಿಕ್ಕಿ ಹೊಡೆದಿದೆ. ಬಾಲಕ ನೆಲಕ್ಕೆ ಬಿದ್ದಾಗ ಗದಗ ಮೂಲದ ಚಾಲಕ ಸಾದಿಕ್ ಆತನನ್ನು ಜೆಸಿಬಿಯ ಮುಂಭಾಗದಿಂದ ಬದಿಗೆ ಸರಿಸಿ ತಾನು ಹೋಗಬೇಕಾದ ಕೆಲಸದ ಜಾಗಕ್ಕೆ ಹೋಗಿದ್ದಾನೆ! ಅಷ್ಟೇ ಅಲ್ಲ ತನ್ನ ಬದಲಿಗೆ ಬೇರೊಬ್ಬ ಚಾಲಕ ಬರುತ್ತಾನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಅಷ್ಟು ಹೊತ್ತಿಗೆ ವಿಷಯ ಊರಿನಲ್ಲೆಲ್ಲ ಗೊತ್ತಾಗಿ ಅವರು ಚಾಲಕನಿಗಾಗಿ ಹುಡುಕಿದ್ದಾರೆ.

ಕೆಲವರಿಗೆ ಜೆಸಿಬಿ ಹೋಗಿರುವುದು ತಿಳಿದು ಉದ್ಯಮಿಯ ಮನೆಗೆ ಹೋಗಿ ಚಾಲಕನನ್ನು ಹಿಡಿದು ಹಾಕಿದರು. ಚಾಲಕ ಆಗಲೂ ಕುಡಿತದ ಮತ್ತಿನಲ್ಲಿದ್ದ ಎಂದು ಹೇಳಲಾಗಿದೆ.‌ ಊರಿನವರು ಸೇರಿ ಚಾಲಕನಿಗೆ ಚೆನ್ನಾಗಿ ಥಳಿಸಿದ್ದಾರೆ. ವಿಟ್ಲ ಪೊಲೀಸರು ಚಾಲಕ ಸಾದಿಕ್‌ನನ್ನು ಬಂಧಿಸಿ ಜೆಸಿಬಿಯನ್ನು ವಶಕ್ಕೆ ಪಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್‌ ಯೋಧ

Exit mobile version