Site icon Vistara News

Video | ಸಿದ್ದರಾಮಯ್ಯ @75: ಸಿದ್ದರಾಮೋತ್ಸವಕ್ಕೂ ಮುನ್ನ ಒಂದು ಸಿಪ್‌ ಬಿಯರ್‌

karnataka-election-siddaramaiah taking risk by contesting on kolar

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ೭೫ನೇ ವರ್ಷದ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿರುವಂತೆಯೇ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬುಧವಾರ ಕಾರ್ಯಕ್ರಮ ನಡೆಯುತ್ತಿದ್ದು, ಮಂಗಳವಾರ ರಾತ್ರಿಯೇ ಕೇಕ್‌ ಕತ್ತರಿಸಿದ್ದರು.

ಮತ್ತೊಂದು ಸಂಭ್ರಮಾಚರಣೆಯನ್ನು ದಾವಣಗೆರೆಯಲ್ಲಿ ಮಾಜಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಆಯೋಜಿಸಿದ್ದರು. ಈ ವೇಳೆ ಕೇಕ್‌ ಜತೆಗೆ ಬಿಯರ್‌ ಶಾಂಪೇನ್‌ ಸಹ ತಂದಿದ್ದರು.

ಕೇಕ್‌ ಕತ್ತರಿಸಿದ ನಂತರ ಬಾಟಲ್‌ ಓಪನ್‌ ಮಾಡಿದ ಮಲ್ಲಿಕಾರ್ಜುನ್‌, ಬಿಯರ್‌ ಅನ್ನು ಮೇಲಕ್ಕೆ ಚಿಮ್ಮಿಸಿದ್ದಾರೆ. ಸಿದ್ದರಾಮಯ್ಯ ಮುಖಕ್ಕೂ ಬಿಯರ್‌ ಚಿಮ್ಮಿಸಿದರು. ನಂತರ ಸಿದ್ದರಾಮಯ್ಯ ಬಾಯಿಗೆ ಬಾಟಲಿಯನ್ನು ಹಿಡಿದರು, ಮಾಜಿ ಸಿಎಂ ಒಂದು ಸಿಪ್‌ ಬಿಯರ್‌ ಕುಡಿದರು.

ಇದೇ ಬಾಟಲಿಯಲ್ಲಿ ಮಲ್ಲಿಕಾರ್ಜುನ್‌ ಸಹ ಬಿಯರ್‌ ಕುಡಿದು, ಹಿಂದೆ ನಿಂತಿದ್ದ ಕಾರ್ಯಕರ್ತರಿಗೆ ಹಸ್ತಾಂತರಿಸಿದ್ದಾರೆ. ಈ ಸಂಭ್ರಮದ ವಿಡಿಯೊ ಸೆರೆಯಾಗಿದ್ದು, ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ |} ಮತ್ತೆ ವೈದ್ಯರಾದ MLA ಯತೀಂದ್ರ ಸಿದ್ದರಾಮಯ್ಯ: ಕುತ್ತಿಗೆಯಲ್ಲಿ ಸ್ಟೆಥೋಸ್ಕೋಪ್‌ ಧರಿಸಿ ಓಡಾಟ

Exit mobile version