Site icon Vistara News

ʼವಿಸ್ತಾರʼ ಕಚೇರಿಗೆ ಡಾ. ಮಹೇಶ ಜೋಶಿ ಭೇಟಿ; ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಮೆಚ್ಚುಗೆ

dr.mahesh joshi final

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಬುಧವಾರ ವಿಸ್ತಾರ ನ್ಯೂಸ್‌ ಕಚೇರಿಗೆ ಸೌಹಾರ್ದಯುತ ಭೇಟಿ ನೀಡಿ ಶುಭ ಹಾರೈಸಿದರು.

ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ಡಾ. ಜೋಶಿ ಅವರಿಗೆ ನೂತನ ಮಾಧ್ಯಮ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ ಆಡಳಿತ ನಿರ್ದೇಶಕ (ಎಂ.ಡಿ) ಧರ್ಮೇಶ್‌ ಅವರು ಜತೆಗಿದ್ದರು.

ವಿಸ್ತಾರ ನ್ಯೂಸ್ ಆಡಳಿತ ನಿರ್ದೇಶಕ ಧರ್ಮೇಶ್ ಅವರ ಜತೆ ಡಾ. ಜೋಶಿ.

ವಿಸ್ತಾರ ನ್ಯೂಸ್‌ ಮಾಧ್ಯಮ ಸಂಸ್ಥೆ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಅವಲೋಕಿಸಿ ಶ್ಲಾಘನೆ ವ್ಯಕ್ತಪಡಿಸಿದ ಡಾ. ಮಹೇಶ ಜೋಶಿ ಅವರು, ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಸುದ್ದಿ ಜಾಲದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಸ್ತಾರ ನ್ಯೂಸ್‌ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಮಹೇಶ್‌ ಜೋಶಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

vistaranews.com ವೆಬ್‌ಸೈಟ್‌ನಲ್ಲಿರುವ ವೈವಿಧ್ಯಮಯ ಸಂಗತಿ, ಉಪಯುಕ್ತ ವರದಿಗಳು, ವಿಶೇಷ ಅಂಕಣಗಳು, ಆರೋಗ್ಯ-ಆರ್ಥಿಕ ಇತ್ಯಾದಿ ಜನೋಪಯೋಗಿ ಮಾಹಿತಿ ಮತ್ತು ಸುದ್ದಿ ನಿರೂಪಣೆಯ ಶೈಲಿ ಆಪ್ತ ಎನಿಸುತ್ತದೆ. ಕನ್ನಡ ನಾಡು-ನುಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ದನಿಯಾಗಿ ವಿಸ್ತಾರ ನ್ಯೂಸ್‌ ಮುನ್ನಡೆಯಲಿದೆ ಎಂಬ ಆಶಯವನ್ನು ಡಾ. ಜೋಶಿ ವ್ಯಕ್ತಪಡಿಸಿದರು.

ವಿಸ್ತಾರ ನ್ಯೂಸ್‌ ಕಚೇರಿಗೆ ಭೇಟಿ ನೀಡಿದ್ದ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅವರನ್ನು ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ಹೂಗುಚ್ಛ ನೀಡಿ ಗೌರವಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ಬಿ ಎಂ ಪಟೇಲ್‌ ಪಾಂಡು, ಸಂಸ್ಥೆಯ ಆಡಳಿತ ನಿರ್ದೇಶಕ ಧರ್ಮೇಶ್‌, ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್‌ ಎಂ.ಎಸ್‌. ಮತ್ತಿತರರಿದ್ದರು.

ಇದನ್ನೂ ಓದಿ | ಡಾ. ವಿಜಯ ಸಂಕೇಶ್ವರ ಅವರನ್ನು ಭೇಟಿ ಮಾಡಿದ ಹರಿಪ್ರಕಾಶ್ ಕೋಣೆಮನೆ

Exit mobile version