Site icon Vistara News

Electricution | ಕೈತೋಟಕ್ಕೆ ಚಾವಣಿ ನಿರ್ಮಿಸುವಾಗ ವಿದ್ಯುತ್‌ ತಗುಲಿ ಡಾಕ್ಟರ್‌ ಸಹಿತ ಇಬ್ಬರು ದಾರುಣ ಮೃತ್ಯು

Electricution

ಹಾಸನ: ಮನೆಯ ಮೇಲಿನ ಕೈತೋಟಕ್ಕೆ ಮೇಲ್ಚಾವಣಿ ಕಟ್ಟುವ ವೇಳೆ ವಿದ್ಯುದಾಘಾತದಿಂದ ಇಬ್ಬರು ಮೃತಪಟ್ಟಿದ್ದಾರೆ. ಹಾಸನ ನಗರದ ದೊಡ್ಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಡಾ.ಶಾಂತರಾಮು (74), ಕಂದಲಿಯ ರಾಜ್‌ಕುಮಾರ್ (48) ಮೃತ ದುರ್ದೈವಿಗಳು.

ಕಂದಲಿಯಲ್ಲಿ ಖಾಸಗಿ ವೈದ್ಯರಾಗಿದ್ದ ಶಾಂತರಾಮ್ ಅವರು ಈಗ ಹಾಸನ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಮನೆಯ ಮೇಲಿದ್ದ ತೈತೋಟಕ್ಕೆ ಮೇಲ್ಚಾವಣಿ ಕಟ್ಟಲು ಮುಂದಾಗಿದ್ದರು. ರಾಜ್‌ ಕುಮಾರ್‌ ಅವರು ಇದಕ್ಕೆ ಸಹಕಾರ ಮಾಡಿದ್ದು ರಾಜ್‌ಕುಮಾರ್.‌

ಅವರಿಬ್ಬರೂ ಮೇಲ್ಚಾವಣಿ ಕಟ್ಟುವ ವೇಳೆ ಅವರು ಬಳಸುತ್ತಿದ್ದ ಕಬ್ಬಿಣದ ರಾಡ್‌ ಒಂದು ವಿದ್ಯುತ್‌ ತಂತಿಗೆ ತಗುಲಿದೆ. ಶಾಕ್‌ಗೆ ಒಳಗಾದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Electric shock | ನಾಮಫಲಕ ಅಳವಡಿಸುವಾಗ ವಿದ್ಯುತ್‌ ಸ್ಪರ್ಶ: ಇಬ್ಬರು ಛಾಯಾಗ್ರಾಹಕರ ದುರ್ಮರಣ

Exit mobile version