Site icon Vistara News

ಮಾಜಿ ಕಾರ್ಪೊರೇಟರ್ ಶಿವಾನಂದ ಮುತ್ತಣ್ಣವರ ವಿರುದ್ಧ ಎಫ್ಐಆರ್

ಮಾಜಿ ಕಾರ್ಪೊರೇಟರ್

ಧಾರವಾಡ: ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಮಹಿಳೆಯಿಂದ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ, ಮಾಜಿ ಕಾರ್ಪೊರೇಟರ್ ಶಿವಾನಂದ ಮುತ್ತಣ್ಣವರ ಮೇಲೆ ಎಫ್ಐಆರ್ ದಾಖಲಾಗಿದೆ. ಕುಟುಂಬವೊಂದರ ಕಲಹಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಿದ ಶಿವಾನಂದ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಸಂತೋಷ್‌ ಸೊಟ್ಟಮ್ಮನವರ್‌ ಹಾಗೂ ಪತ್ನಿ ನಡುವೆ ಕಲಹ ಉಂಟಾಗಿತ್ತು. ಈ ಕಾರಣಕ್ಕೆ, ಗಂಡನ ಮನೆಯವರು ತನಗೆ ವರದಕ್ಷಿಣೆ ಕಿರುಕುಳ ನೀಡಿ, ಗಂಡನಿಗೆ ಬೇರೆ ಮದುವೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪತಿಯ ಮನೆಯಿಂದ ತನ್ನನ್ನು ಹೊರಹಾಕಲಾಗಿದೆ ಎಂದಿರುವ ಮಹಿಳೆ, ಒಟ್ಟು 17 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಶಿವಾನಂದ ಮುತ್ತಣ್ಣವರ್‌, ಪತಿ ಸಂತೋಷ್‌ ಸ್ನೇಹಿತ. ಇವರಿಬ್ಬರ ಜಗಳ ಬಿಡಿಸಲು ಒಮ್ಮೆ ಬಂದಿದ್ದರು ಎನ್ನಲಾಗಿದೆ. ಆದರೆ ತನ್ನನ್ನು ಮನೆಯಿಂದ ಹೊರಹಾಕುವಲ್ಲಿ ಶಿವಾನಂದ ಅವರೂ ಪಾತ್ರ ವಹಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಧಾರವಾಡ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದುವೆ ಮಂಟಪದಲ್ಲಿ ಕಳಚಿ ಬಿದ್ದ ವಿಗ್‌, ವರನಿಂದ ಖರ್ಚು ವಸೂಲಿ ಮಾಡಿದ ವಧು!

Exit mobile version