Site icon Vistara News

Assault Case : ಪತ್ನಿ ಜತೆಗೆ ಸಲುಗೆ; ಸಿಟ್ಟಾದ ಪತಿಯಿಂದ ಹುಬ್ಬಳ್ಳಿಯಲ್ಲಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು!

Christian priest attacked in Hubballi

ಹುಬ್ಬಳ್ಳಿ: ಹುಬ್ಬಳ್ಳಿಯ ಹೆಗ್ಗೆರಿ ಚರ್ಚ್ ಬಳಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು (Assault Case) ಬಿದ್ದಿದೆ. ಪಾಸ್ಟರ್ ಸಂತೋಷ ಗಂಧದ ಎಂಬುವರಿಗೆ ನವೀನ್ ಒಳಗುಂದಿ ಎಂಬಾತ ಹಲ್ಲೆ ನಡೆಸಿದ್ದಾರೆ.

ಪಾಸ್ಟರ್‌ ಸಂತೋಷ್‌, ನವೀನ್‌ ದಂಪತಿ‌ ನಡುವೆ ಕಲಹಕ್ಕೆ ಕಾರಣವಾಗಿದ್ದಾನೆಂದು ಹಲ್ಲೆ ನಡೆಸಿದ್ದಾರೆ. ನವೀನ್‌ ಪತ್ನಿ ಫ್ರೆನಿ ಸ್ನೇಹ ಬೆಳೆಸಿದ ಸಂತೋಷ್‌, ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದಾನೆಂದು ಆರೋಪವಿದೆ.

ಸಂತೋಷ್‌ ಫ್ರೇನಿ ಜತೆಗೆ ಸಲುಗೆ ಬೆಳೆಸಿ ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ. ಸಂತೋಷ ಗೆಳೆತನದ ಕಾರಣದಿಂದಾಗಿ ಫ್ರೆನಿ ನವೀನ್‌ನಿಂದ ದೂರವಾಗಿದ್ದಳು. ಇದರಿಂದ ಸಿಟ್ಟಿಗೆದ್ದ ನವೀನ್‌ ನಡುರಸ್ತೆಯಲ್ಲೇ ಕ್ರಿಶ್ಚಿಯನ್ ಧರ್ಮಗುರು ಆಗಿರುವ ಸಂತೋಷ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಲ್ಲೆ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Accident Case : ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ನೀರುಪಾಲು; ಟ್ಯಾಕ್ಟರ್‌ಗೆ ಸಿಲುಕಿ ವಿದ್ಯಾರ್ಥಿ ಸಾವು

ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ, ಆಘಾತಕಾರಿ ವಿಡಿಯೊ ಇಲ್ಲಿದೆ

ಬೆಂಗಳೂರು: ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜೀವನ್​ಭಿಮಾನಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ನಾಯಿ ಸಾಕುವ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಪೊಲೀಸ್​ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.

ಬಾಡಿಗೆ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಗಲಾಟೆ ಎಂದು ಹೇಳಲಾಗಿದೆ. ರಾತ್ರಿ ವೇಳೆ ನಾಲ್ಕೈದು ಜನ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮದ್ಯರಾತ್ರಿ ಒಂದು ಗಂಟೆ ಸಂಧರ್ಭದಲ್ಲಿ ನಡೆದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ

ನಾಯಿ ಸಾಕುವ ವಿಚಾರದಲ್ಲಿ ಮೊದಲಿನಿಂದಲೂ ನಡೆಯುತ್ತಿದ್ದ ಗಲಾಟೆ ತಾರಕ್ಕೇರಿದೆ ಎಂದು ಹೇಳಲಾಗಿದೆ. ನಾಯಿ ಸಾಕಬಾರದು ಎಂದು ಮನೆ ಮಾಲೀಕರು ಹೇಳಿದ್ದ ಹೊರತಾಗಿಯೂ ಬಾಡಿಗೆದಾರರು ಒಪ್ಪಿರಲಿಲ್ಲ. ನಾಯಿ ಸಾಕುವ ಕಾರಣ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದ್ದರು. ಈ ವಿಚಾರದಲ್ಲಿ ಅವರಿಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ. ತಾವು ದೂರು ನೀಡಿದರೂ ಎಫ್ಐಆರ್ ದಾಖಲಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version