Site icon Vistara News

Murder case | ಆಸ್ತಿ ಜಗಳ ತಾರಕಕ್ಕೇರಿ ಮಾವನನ್ನೇ ಕೊಂದ ಅಳಿಯಂದಿರು

Murder case

ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಅಳಿಯಂದಿರು ಮಾವನನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ.

ಸುಳ್ಳ ಗ್ರಾಮದ ಶಿವಪ್ಪ ಮಳ್ಳೊಳ್ಳಿ (56) ಕೊಲೆಯಾದ ವ್ಯಕ್ತಿ. ಕೆಲವು ವರ್ಷಗಳಿಂದ ಆಸ್ತಿ ವಿಚಾರಕ್ಕಾಗಿ ಇವರಿಗೂ ಅಳಿಯಂದಿರಾದ ಗುರಪ್ಪ, ಷಣ್ಮುಖ, ಗಂಗಪ್ಪಾ ಹಾಗೂ ಸಿದ್ರಾಮ ಜೊತೆ ಕಲಹ ನಡೆಯುತ್ತಿತ್ತು. ಗುರುವಾರ ರಾತ್ರಿ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಎದುರು ಮಾರಕಾಸ್ತ್ರಗಳಿಂದ ಶಿವಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕೊಲೆಗಡುಕರು, ಬಳಿಕ ಪರಾರಿಯಾಗಿದ್ದಾರೆ. ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case | ಸಂಸದ ರಮೇಶ ಜಿಗಜಿಣಗಿ ವಾಹನ ಚಾಲಕರಾಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ

Exit mobile version