Site icon Vistara News

IND vs PAK | ಗೆದ್ದು ಬಾ ಟೀಂ ಇಂಡಿಯಾ; ಹುಬ್ಬಳ್ಳಿಯ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

IND VS PAK2

ಹುಬ್ಬಳ್ಳಿ/ವಿಜಯಪುರ: ಭಾರತ ಹಾಗೂ ಪಾಕಿಸ್ತಾನ (Ind vs Pak) ತಂಡಗಳ ನಡುವೆ ಏಷ್ಯಾ ಕಪ್‌ ಪಂದ್ಯ ಭಾನುವಾರ ರಾತ್ರಿ ಆರಂಭವಾಗಿದೆ. ಈ ಪಂದ್ಯಾವಳಿಯಲ್ಲಿ ಭಾರತ ತಂಡದ ಗೆಲುವಿಗಾಗಿ ಹುಬ್ಬಳ್ಳಿಯ ಫತೇಷಾವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ರಜತ್ ಉಳ್ಳಾಗಡ್ಡಿಮಠ, ಶಹಜಮಾನ್ ಮುಜಾಹಿದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ‌ಟೀಮ್ ಇಂಡಿಯಾ ಜಯಭೇರಿ ಭಾರಿಸಲಿ ಎಂದು ಪ್ರಾರ್ಥಿಸಿದರು. ರಾಷ್ಟ್ರ ಧ್ವಜವನ್ನು ಹಿಡಿದು ಟೀಮ್ ಇಂಡಿಯಾ ಪರ ಜಯ ಘೋಷಣೆಗಳನ್ನು ಕೂಗಿದರು.

ದೇವರ ಮೊರೆ ಹೋದ ಬಾಲಕಿ

ವಿಜಯಪುರದಲ್ಲಿ ಟೀಂ ಇಂಡಿಯಾ ಗೆಲುವಿಗೆ ಬಾಲಕಿಯೊಬ್ಬಳು ದೇವರ ಮೊರೆ ಹೋಗಿದ್ದಾಳೆ. ನಗರದ ಜಾಡರ ಓಣಿಯ ಆಶ್ರಿತಾ ಅಶೋಕ ಗೊಳಸಂಗಿ ಮಹಾಲಕ್ಷ್ಮೀ ಪೂಜೆಯಲ್ಲಿ ರಾಷ್ಟ್ರ ಧ್ವಜವಿಟ್ಟು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಳೆ.

ಕಾಫಿ ನಾಡು ಚಂದ್ರು ಸ್ಟೈಲ್‌ನಲ್ಲಿ ಟೀಂ ಇಂಡಿಯಾಗೆ ವಿಶ್‌

ಇಂಡಿಯಾ ಗೆಲುವಿಗೆ ಕಾಫಿ ನಾಡು ಚಂದು ಸ್ಟೈಲ್‌ನಲ್ಲಿ ವಿಶ್‌ ಮಾಡಿರುವ ವಿಡಿಯೊ ವೈರಲ್‌ ಆಗಿದೆ. ಕಾಫಿ ನಾಡು ಚಂದು ಸ್ಟೈಲ್‌ನಲ್ಲಿ ಇಂಡಿ ಮೂಲದ ಇಮ್ರಾನ್‌ನಿಂದ ಟೀಂ ಇಂಡಿಯಾಗೆ ವಿಭಿನ್ನವಾಗಿ ವಿಶ್ ಮಾಡಲಾಗಿದೆ. ನಾನು ಟೀಂ ಇಂಡಿಯಾ ಮ್ಯಾಚ್‌ ಹಾಗೂ ವಿರಾಟ್ ಅಣ್ಣ ಅಭಿಮಾನಿ, ಗೆದ್ದು ಬಾ ಇಂಡಿಯಾ. ಗೆದ್ದೆ ಗೆಲ್ಲುತ್ತೇ ಇಂಡಿಯಾ, ಆಲ್‌ ದಿ ಬೆಸ್ಟ್‌ ಇಂಡಿಯಾ ಎಂದು ಅವರು ವಿಶ್‌ ಮಾಡಿದ್ದಾರೆ.

ಇದನ್ನೂ ಓದಿ | IND vs PAK | ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ಇಂಡಿಯಾ-ಪಾಕ್‌ ಮ್ಯಾಚ್‌ ನೇರ ಪ್ರದರ್ಶನ

Exit mobile version