Site icon Vistara News

Giant Wheel Accident: ಜೈಂಟ್ ವ್ಹೀಲ್‌ಗೆ ಸಿಕ್ಕಿ ಪೂರಾ ಕಿತ್ತು ಬಂದ ಬಾಲಕಿ ತಲೆಕೂದಲು: ಶ್ರೀರಂಗಪಟ್ಟಣದಲ್ಲಿ ಅವಘಡ

#image_title

ಮಂಡ್ಯ: ಜೈಂಟ್ ವ್ಹೀಲ್‌ಗೆ ಬಾಲಕಿಯ ತಲೆಕೂದಲು ಆಕಸ್ಮಿಕವಾಗಿ ಸಿಕ್ಕಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ (Giant Wheel Accident) ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ತಡರಾತ್ರಿ ನಡೆದಿದೆ. ಬೆಂಗಳೂರಿನ ವಿದ್ಯಾಶ್ರೀ (14) ಗಂಭೀರ ಗಾಯಗೊಂಡಿರುವ ಬಾಲಕಿ.

ರಥಸಪ್ತಮಿ ಅಂಗವಾಗಿ ಮೈದಾನದಲ್ಲಿ ಜಾತ್ರೆಯನ್ನು ಆಯೋಜಿಸಲಾಗಿತ್ತು. ಜಾತ್ರೆಯಲ್ಲಿ ಜೈಂಟ್‌ ವ್ಹೀಲ್‌ ಗೇಮ್ ಹಾಕಲಾಗಿತ್ತು. ಇದರಲ್ಲಿ ಕುಳಿತಿದ್ದ ಬಾಲಕಿಯ ತಲೆಕೂದಲು ಯಂತ್ರಕ್ಕೆ ಸಿಲುಕಿದೆ. ಪರಿಣಾಮ ಕ್ಷಣಮಾತ್ರದಲ್ಲೇ ಸಂಪೂರ್ಣ ತಲೆಕೂದಲು ಕಿತ್ತುಕೊಂಡು ಬಂದಿದೆ. ಬಾಲಕಿಯ ತಲೆಯಿಂದ ತೀವ್ರ ರಕ್ತಸ್ರಾವ ಉಂಟಾಗಿದೆ.

ಇದನ್ನೂ ಓದಿ: Gujarat riots | ಗುಜರಾತ್‌ ಹತ್ಯಾಕಾಂಡ ಹಿಂದುಗಳ ಪರಾಕ್ರಮ: ವಿವಾದಾತ್ಮಕ ಹೇಳಿಕೆ ನೀಡಿದ ವಿಹಿಂಪ ನಾಯಕ ಶರಣ್‌ ಪಂಪ್‌ವೆಲ್‌

ಗಂಭೀರ ಗಾಯಗೊಂಡಿದ್ದ ವಿದ್ಯಾಶ್ರೀಯನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜೈಂಟ್ ವ್ಹೀಲ್‌ ಆಯೋಜಿಸಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ದಾಖಲಾಗಿದೆ.

Exit mobile version