Site icon Vistara News

ಸಂಪುಟ ನಿರ್ಣಯ | ಸ್ವಾತಂತ್ರೋತ್ಸವ ಪ್ರಯುಕ್ತ 42 ಕೈದಿಗಳ ಬಿಡುಗಡೆ ಹಾಗೂ ಇನ್ನಿತರ ನಿರ್ಧಾರಗಳು

ಬೆಂಗಳೂರು: ಸ್ವಾತಂತ್ರ್ಯೋತ್ಸವ ಪ್ರಯುಕ್ತ 42 ಖೈದಿಗಳನ್ನು ಬಿಡುಗಡೆ ಮಾಡಲು ಅನುಮತಿ, ಯಲಹಂಕ ಬಳಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಅಭಿವೃದ್ಧಿ ಸೇರಿ ಅನೇಕ ನಿರ್ಧಾರಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟ ಸಭೆ ತೆಗೆದುಕೊಂಡಿದೆ.

ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಕುರಿ, ಮೇಕೆ ನಿಗಮದ ಕುರಿಗಾಹಿಳಿಗಾಗಿ ಅಮೃತ ಸ್ವಾಭಿಮಾನಿ ಕುರಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ಸಿವಿಲ್ ಸರ್ವೀಸ್ ನೌಕರರ ಆಸ್ತಿ ಘೋಷಣೆ ತಿದ್ದುಪಡಿಗೆ ಮಾರ್ಚ್ 30 ರವರೆಗೆ ಅವಕಾಶ ನೀಡಲಾಗಿದೆ ಎಂದರು.

ಸಂಪುಟ ಸಭೆಯ ಇನ್ನಿತರ ನಿರ್ಣಯಗಳು

ನಮ್ಮದು ಕೇಡರ್‌ ಪಕ್ಷ

ಬಿಜೆಪಿಗೆ ರೌಡಿಶೀಟರ್ ಸೇರ್ಪಡೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ರೌಡಿಶೀಟರ್‌ಗಳನ್ನು ಸೇರಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಾಯಕರಿಗೆ ಪರಿಚಯ ಇರುವವರು ಯಾರೋ ಕಾರ್ಯಕ್ರಮಗಳಿಗೆ ಬಂದಿರಬಹುದು. ಕಾರ್ಯಕ್ರಮಕ್ಕೆ ಬಂದವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಯಾರದೋ ಅವಲಂಬನೆಯಿಂದ ರಾಜಕಾರಣ ಮಾಡಲ್ಲ. ಬಿಜೆಪಿ ಕೇಡರ್ ಬೇಸ್ ಪಾರ್ಟಿ ಎಂದರು.

ಇದನ್ನೂ ಓದಿ | ಸದನದಲ್ಲಿ Pay CM ಜಟಾಪಟಿ | ಸಾರ್ವಜನಿಕ ಕ್ಷೇತ್ರದಲ್ಲಿರೋರು ʼಸೀಜರನ ಹೆಂಡತಿʼ ಇದ್ದ ಹಾಗೆ ಎಂದ ಮಾಧುಸ್ವಾಮಿ

Exit mobile version