Site icon Vistara News

ಸಂಪುಟ ಸಭೆ | ರಾಜ್ಯದಲ್ಲಿ ಎರಡು ಹೊಸ Cricket ಕ್ರೀಡಾಂಗಣ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ

ಬೆಂಗಳೂರು: ರಾಜ್ಯದ ಎರಡು ಕಡೆ ಹೊಸ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ನೀಡುವುದು, ಬಳ್ಳಾರಿಯಲ್ಲಿ ಸರ್ಕಾರದ ಹಣದಿಂದಲೇ ವಿಮಾನ ನಿಲ್ದಾಣ ನಿರ್ಮಿಸುವುದು ಸೇರಿ ಅನೇಕ ಪ್ರಮುಖ ನಿರ್ಧಾರಗಳನ್ನು ರಾಜ್ಯ ಸಂಪುಟ ಸಭೆ ಕೈಗೊಂಡಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ನಿರ್ಧಾರಗಳನ್ನು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ರಾಜ್ಯದ ಎರಡು ಕಡೆ ಹೊಸ ಕ್ರಿಕೆಟ್ ಕ್ರೀಡಾಂಗಣ ಮಾಡಲು ಸಂಪುಟ ಅನುಮೋದನೆ ನೀಡಿದೆ. ಬಳ್ಳಾರಿಯಲ್ಲಿ ಕ್ರೀಡಾಂಗಣ ಮಾಡಲು 19.26ಎಕರೆ ಜಮೀನು KSCA ನವರಿಗೆ ನೀಡಲು ತಿರ್ಮಾನ ಮಾಡಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಕ್ರೀಡಾಂಗಣ ಮಾಡಲು 23.25 ಎಕರೆ ಜಮೀನು ‌KSCAಗೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ ಎಂದರು.

ಕೆ-ಸ್ವಾನ್‌ ಔಟ್‌ ಡೇಟ್‌ ಆಗಿದೆ, ಹೊಸ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಲಾಗಿದೆ. ಕೇಂದ್ರ ಸರ್ಕಾರದ ಐಟಿ ಇಲಾಖೆ ಸಹಭಾಗಿತ್ವದಲ್ಲಿ 931.15 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಮಟ್ಟಕ್ಕೂ ನೆಟ್‌ವರ್ಕ್‌ ಸಂಪರ್ಕ.

ಚನ್ನಪಟ್ಟಣ ತಾಲ್ಲೂಕಿನ ತಗಚಿಗೆರೆಯಲ್ಲಿ ಗೃಹ ಮಂಡಳಿಗೆ ಭೂಮಿ ಕೊಡಲಾಗಿತ್ತು. ಭೂಮಿಯ ರೈತರು ಹೆಚ್ಚು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಅವರಿಗೆ ನಿವೇಶನ ನೀಡಲು ಸಂಪುಟ ಒಪ್ಪಿಗೆ.

ಬಳ್ಳಾರಿಯಲ್ಲಿ ಹೊಸ ವಿಮಾನ ನಿಲ್ದಾಣ ಮಾಡಲು ಸಂಪುಟ ಅನುಮೋದನೆ ನೀಡಿದೆ. 2008ರಲ್ಲಿ ವಿಮಾನ ನಿಲ್ದಾಣ ಗುತ್ತಿಗೆ ಪಡದಿದ್ದ Marg Ltd Chennai ಸಂಸ್ಥೆಯವರು ಕೆಲಸ ಆರಂಭಿಸಲಿಲ್ಲವಾದ್ಧರಿಂದ ಅವರ ಗುತ್ತಿಗೆ ರದ್ದು ಮಾಡಲಾಗಿದೆ. ಆ ಗುತ್ತಿಗೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ನೀಡಲಾಗಿತ್ತು. ಆದರೆ ಇದೀಗ, ಗಣಿ ಪ್ರದೇಶದಿಂದ ಸಂಗ್ರಹವಾಗುವ KMRC fundನಲ್ಲಿ ಬರುವ ಹಣ ಬಳಕೆ ಮಾಡಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಗುತ್ತಿಗೆ ಪಡೆದು ಈಡೇರಿಸದ ಕಂಪನಿಗೆ ದಂಡ ವಿಧಿಸಲು ತೀರ್ಮಾನ ಮಾಡಲಾಗಿದೆ ಎಂದರು.

ಮತ್ತಷ್ಟು ಪ್ರಮುಖ ನಿರ್ಧಾರಗಳು:

👉🏾ಬ್ಯಾಟರಾಯನಪುರ ಗ್ರಾಮದಲ್ಲಿ ಹಣ್ಣು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಟೆಂಡರ್ ರದ್ದು ಮಾಡಲು ನಿರ್ಧಾರ. ಮರು ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ. ಕಂಪನಿಗೆ ದಂಡ ವಿಧಿಸಲು ತೀರ್ಮಾನ.
👉🏾 ಬೆಂಗಳೂರು ಹೊರವಲಯದ ರಸ್ತೆ ಅಭಿವೃದ್ಧಿಗೆ ಅನುಮೋದನೆ. ವರ್ತೂರು ಬಳಿ ಎಲಿವೇಟೆಡ್ ಕಾಮಗಾರಿ ನಿರ್ಮಾಣ. 1.3 km ನಿಂದ 1.9kmಗೆ ರಸ್ತೆ ಅಗಲ ವಿಸ್ತರಣೆಗೆ ಅನುಮತಿ. ಕಾಮಗಾರಿಗೆ ಬೇಕಾದ ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ. ಇದಕ್ಕಾಗಿ 2,095 ಕೋಟಿ ರೂ. ನೀಡಲು ಒಪ್ಪಿಗೆ.
👉🏾 ಕೆಎಎಸ್ ಅಧಿಕಾರಿಗಳಾದ ನಾಗರಾಜ್,ಅರುಣ ಪ್ರಭ, ಅಪರ್ಣ ಮೇಲಿನಿ ಲೋಕಾಯುಕ್ತ ಕೇಸ್ ಕೈ ಬಿಡಲು ಸಂಪುಟ ತೀರ್ಮಾನ.
👉🏾 ಗೋಕಾಕ್ ತಾಲೂಕಿನ ಕೌಜಲಗಿ ಸುತ್ತಮುತ್ತ ಲಿಫ್ಟ್ ಇರಿಗೇಶನ್ ಗಾಗಿ 32 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ.
👉🏾 ಸಾರ್ವಜನಿಕ ಸಾರಿಗೆ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಗೆ ಕೇಂದ್ರ ಸಹಭಾಗಿತ್ವದಲ್ಲಿ 20.36 ಕೋಟಿ ರೂ. ವೆಚ್ಚದಲ್ಲಿ ಅಳವಡಿಕೆಗೆ ಒಪ್ಪಿಗೆ.
👉🏾 262 ಹೊಸ 108 ಆಂಬ್ಯುಲೆನ್ಸ್ ಖರೀದಿಗೆ ಅನುಮೋದನೆ. ಇದಕ್ಕಾಗಿ 98.09 ಕೋಟಿ ಬಿಡುಗಡೆಗೆ ಒಪ್ಪಿಗೆ.

👉🏾 ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ಸ್ಥಾಪನೆಗೆ 50 ಕೋಟಿ ಬಿಡುಗಡೆಗೆ ಒಪ್ಪಿಗೆ.
👉🏾 ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲು ಸಂಪುಟ ಸಭೆಯಲ್ಲಿ ತಿರ್ಮಾನ. ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಕ್ಕೆ ಸಂಪುಟ ಅನುಮೋದನೆ. ಮೊದಲು ತುಮಕೂರು, ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪನೆ. ಆರಂಭದಲ್ಲಿ KIADBಯಿಂದಲೇ ಮಾನಿಟರ್ ಮಾಡಲು ನಿರ್ಧಾರ. ಗುಜರಾತ್‌ನಲ್ಲಿರುವ ವ್ಯವಸ್ಥೆ ಸ್ವಲ್ಪ ಬದಲಾವಣೆ ಮೂಲಕ ರಾಜ್ಯದಲ್ಲಿ ಜಾರಿ.

ಇದನ್ನೂ ಓದಿ | Cabinet Meeting | ಸಾಲಕ್ಕೆ ಖಾತರಿ, ಕೆರೆಗಳಿಗೆ ನೀರು, ವಿವಿ ಅನುದಾನಕ್ಕೆ ಸಂಪುಟ ಒಪ್ಪಿಗೆ

Exit mobile version