Site icon Vistara News

Love Failure : ಯುವತಿಯಿಂದ ಪ್ರೇಮ ನಿರಾಕರಣೆ; ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

Naveen ends life

ಬೆಂಗಳೂರು: ಪ್ರೀತಿ, ಪ್ರೇಮಗಳ ಬಲೆಗೆ ಸಿಲುಕಿದ ಯುವಕನೊಬ್ಬ ಅದರಲ್ಲಿ ಯಶಸ್ಸು ಕಾಣಲು ವಿಫಲನಾದೆ (Love Failure) ಎಂಬ ನೋವಿನಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಪ್ರೇಮಿಸಿದ ಯುವತಿ ಪ್ರೀತಿಯನ್ನು ನಿರಾಕರಿಸಿದಳು ಎಂಬ ಹತಾಶೆಯಿಂದ ತನ್ನ ಬದುಕನ್ನೇ ಅಂತ್ಯಗೊಳಿಸಿಕೊಂಡಿದ್ದಾನೆ (young Man suicide).

ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೆಎಸ್‌ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಈ ಯುವಕನನ್ನು ನವೀನ್‌ (27) ಎಂದು ಗುರುತಿಸಲಾಗಿದೆ. ಮೃತ ನವೀನ್ ಕುಟುಂಬಸ್ಥರಿಂದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆತ ಬರೆದಿಟ್ಟ ಡೆತ್‌ ನೋಟ್‌ನ್ನು ಕೂಡಾ ಒಪ್ಪಿಸಿದ್ದಾರೆ. ಡೆತ್‌ ನೋಟ್‌ ಬರೆದಿಟ್ಟ ಬಳಿಕ ಆತ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಡೆತ್‌ ನೋಟ್‌ ಪಕ್ಕದಲ್ಲೇ ವಿಷದ ಬಾಟಲಿ ಕೂಡಾ ಸಿಕ್ಕಿದೆ.

ಮೂಲತಃ ಕೊಳ್ಳೆಗಾಲದ ಯುವಕ ನವೀನ್ ತನ್ನ ಮನೆಯವರ ಜತೆ ಇಲ್ಲೇ ವಾಸವಾಗಿದ್ದ. ಬೆಂಗಳೂರಿನಲ್ಲಿ ಬಾಳೆಮಂಡಿ ಕೆಲಸ ಮಾಡಿಕೊಂಡಿದ್ದ ಆತ ಯಾರೋ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದ. ಆಕೆ ಕೆಲವು ಸಮಯ ಆತನ ಜತೆ ಉತ್ತಮ ಒಡನಾಟ ಮಾಡಿದವಳು ಬಳಿಕ ಪ್ರೀತಿ ಮತ್ತು ಮದುವೆಯ ವಿಚಾರಕ್ಕೆ ಬಂದಾಗ ನಿರಾಕರಣೆ ಮಾಡಿದ್ದಾಳೆ ಎನ್ನಲಾಗಿದೆ.

ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ, ಸಾಕುತ್ತೇನೆ, ಚೆನ್ನಾಗಿ ನೋಡ್ಕೊಳ್ತೇನೆ ಎಂದು ಹೇಳಿದರೂ ಆಕೆ ನನ್ನ ಪ್ರೀತಿಯನ್ನು ನಿರಾಕರಣೆ ಮಾಡಿದಳು. ಆಕೆಯ ಪ್ರೀತಿ ಇಲ್ಲದೆ ಬದುಕಲಾರೆ ಎಂದೆಲ್ಲಾ ಬರೆದಿರುವ ಆತ ಆಕೆಯ ಹೆಸರನ್ನೂ ಕೂಡಾ ಉಲ್ಲೇಖಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರಿಕ್ಷೆಗೆ ರವಾನೆ ಮಾಡಲಾಗಿದೆ. ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಪ್ರಿಯಕರ ದೂರವಾಗಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ

ಮೈಸೂರು: ಪ್ರಿಯಕರ ದೂರವಾಗಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕು ಗೌಡೇನಹಳ್ಳಿಯಲ್ಲಿ ನಡೆದಿದೆ. ಯುವಕನೊಬ್ಬ 4 ವರ್ಷದಿಂದ ಪ್ರೀತಿಸಿ, ಈಗ ಕೈಕೊಟ್ಟು ಮತ್ತೊಬ್ಬ ಯುವತಿ ಜತೆ ಓಡಾಡುತ್ತಿರುವುದನ್ನು ಕಂಡ ಯುವತಿ, ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ.

ನಿಸರ್ಗ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೆ.ಆರ್.ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ನಿಸರ್ಗಗೆ ಕೈಕೊಟ್ಟ ಯುವಕ, ಮತ್ತೊಬ್ಬ ಯುವತಿಯ ಹಿಂದೆ ಬಿದ್ದಿದ್ದ. ಇದನ್ನೂ ನೋಡಿ ಸಹಿಸಲಾಗದೆ ಮನನೊಂದು ನಿಸರ್ಗ ವಿಷ ಸೇವಿಸಿದ್ದಾಳೆ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸಾವಿಗೆ ಮುನ್ನ ಕೈ ಕೊಯ್ದುಕೊಂಡು ನೊಂದ ನಿಸರ್ಗ ರೀಲ್ಸ್ ಮಾಡಿದ್ದಾಳೆ. ನನ್ನ ಸಾವಿಗೆ ಸುಹಾಸ್, ಅನನ್ಯಾ ಹಾಗೂ ಆಕೆ ತಂದೆ ಗೋಪಾಲ ಕೃಷ್ಣ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾಳೆ. ಇದರ ಪ್ರಕಾರ ಐದು ಮಂದಿ ವಿರುದ್ಧ ಕೆ.ಆರ್. ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?

ಕ್ಷಮಿಸಿ ಅಪ್ಪ, ನಿಮಗೆ ನನ್ನಿಂದ ಬಹಳ ನೋವಾಗಿದೆ. ಸುಹಾಸ್‌ ಎಂಬ ಯುವಕನನ್ನು ನಾನು ಲವ್‌ ಮಾಡಿದ್ದು ನಿಜ. ಆದರೆ, ಆತ 4 ವರ್ಷ ಪ್ರೀತಿ ಮಾಡಿ, ನನ್ನನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡಿದ್ದಾನೆ. ಅನನ್ಯಾ ಎಂಬ ಹುಡುಗಿ ಬಂದ ತಕ್ಷಣ ನನಗೆ ಕೈಕೊಟ್ಟು ಹೋಗಿದ್ದಾನೆ. ಅವನು ಮಾಡಿರುವ ಮೋಸವನ್ನು ನೋಡಿ ನನಗೆ ಸಹಿಸಲು ಆಗುತ್ತಿಲ್ಲ. ಆ ಅನನ್ಯಾ ಹಾಗೂ ಸುಹಾಸ್ ಪದೇಪದೇ ನನ್ನನ್ನು ಅವಮಾನಿಸಿ, ಹೀಯಾಳಿಸಿ ಸಾಕಷ್ಟು ನೋವು ಕೊಟ್ಟಿದ್ದಾರೆ. ಅವರಿಬ್ಬರನ್ನು ನೀವು ಸುಮ್ಮನೆ ಬಿಡಬೇಡಿ ಅಪ್ಪ ಎಂದು ನಿಸರ್ಗ ಡೆತ್‌ ನೋಟ್‌ನಲ್ಲಿ ಬರೆದಿದ್ದಾಳೆ.

ಇದನ್ನೂ ಓದಿ: Self Harming : ಮದುವೆಯಾದ ಎರಡೇ ತಿಂಗಳಿಗೆ ತಾಯಿ ಮನೆಯಲ್ಲಿ ನವವಿವಾಹಿತೆ ಆತ್ಮಹತ್ಯೆ!

Exit mobile version