Site icon Vistara News

Murder Case: ರೀಲ್ಸ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು; ಗಂಡನಿಂದ ಕೊಲೆ, ಹೆಣ ಸಾಗಿಸಿದ ತಂದೆ!

murder case mandya

ಮಂಡ್ಯ: ಸದಾ ರೀಲ್ಸ್‌ ಮಾಡುತ್ತಿದ್ದ ಸುಂದರಿಯೊಬ್ಬಳಿಗೆ ಮೊಬೈಲ್ ಗೀಳೇ (mobile addiction) ಕಂಟಕವಾಗಿದೆ. ರೀಲ್ಸ್ (reels) ಮಾಡುವ ಜೊತೆಗೆ ಸ್ನೇಹಿತರೊಂದಿಗೆ ಚಾಟಿಂಗ್ (chatting) ಹುಚ್ಚು ಬೆಳೆಸಿಕೊಂಡಿದ್ದ ಮಡದಿಯ ಬಗ್ಗೆ ಕ್ರುದ್ಧನಾದ ಗಂಡ, ಆಕೆಯನ್ನು ಕೊಂದು (murder case) ನದಿಗೆಸೆದಿದ್ದಾನೆ. ಆಕೆಯ ಸ್ವಂತ ತಂದೆ ಆಕೆಯ ಹೆಣ ಸಾಗಿಸಲು ಅಳಿಯನಿಗೆ ನೆರವಾಗಿದ್ದಾನೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಪೂಜಾ (26) ಗಂಡನಿಂದಲೇ ಕೊಲೆಯಾದ (husband kills wife) ಮಹಿಳೆ. ಶ್ರೀನಾಥ್ (33) ವೇಲ್‌ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಂದಿರುವ ಪಾತಕಿ. 9 ವರ್ಷದ ಹಿಂದೆ ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದ ಈ ದಂಪತಿಗೆ ಒಂದು ಹೆಣ್ಣು ಮಗುವೂ ಇದೆ.

ಈಚೆಗೆ ಕೆಲವು ವರ್ಷಗಳಿಂದ ಪೂಜಾ ಟಿಕ್‌ಟಾಕ್ ಗೀಳು ಬೆಳೆಸಿಕೊಂಡಿದ್ದರು. ರೀಲ್ಸ್ ಮಾಡುವ ಜೊತೆಗೆ ಹೆಚ್ಚೆಚ್ಚು ಫೋನ್ ಬಳಸುತ್ತಿದ್ದರು. ಅತಿಯಾದ ಫೋನ್ ಬಳಕೆಯಿಂದಾಗಿ ದಂಪತಿ ಮಧ್ಯೆ ಪದೇ ಪದೆ ಜಗಳವಾಗುತ್ತಿತ್ತು. ಈಕೆ ಪರಪುರುಷನೊಂದಿಗೆ ಅನೈತಿಕ ಸಂಬಂಧ (illicit relationship) ಹೊಂದಿದ್ದಾಳೆ ಎಂಬ ಶಂಕೆಯಿಂದ ನರಳುತ್ತಿದ್ದ ಶ್ರೀನಾಥ್ ಇದರಿಂದ ಜಗಳ ತೆಗೆಯುತ್ತಿದ್ದ.

ಸೋಮವಾರ ಶ್ರೀನಾಥ್‌ ಸಿಟ್ಟು ನೆತ್ತಿಗೇರಿ ವೇಲ್‌ನಿಂದ ಪೂಜಾಳ ಕೊರಳು ಬಿಗಿದು ಕೊಲೆ ಮಾಡಿದ್ದಾನೆ. ಕೊಲೆಗೈದ ಬಳಿಕ ಮಾವ ಶೇಖರ್‌ಗೆ ಕರೆ ಮಾಡಿದ್ದ. ಮಗಳ ಕೊಲೆ ತಿಳಿದರೂ ಪೊಲೀಸರಿಗೆ ಹೇಳದೆ ಅಳಿಯನಿಗೆ ಶೇಖರ ಸಾಥ್ ನೀಡಿದ್ದ. ಅಳಿಯ-ಮಾವ ಸೇರಿಕೊಂಡು ಮನೆಯಿಂದ ಬೈಕಿನಲ್ಲಿ ಶವ ಸಾಗಿಸಿದ್ದರು. ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆಸೆದಿದ್ದರು.

ಕೊಲೆ ಆರೋಪಿ ಶ್ರೀನಾಥ್‌, ಮಾವ ಶೇಖರ್

ಮಗಳ ಶವವನ್ನು ನದಿಗೆಸೆದು ತಂದೆ ಶೇಖರ್ ಎಂದಿನಂತೆ ಹೋಟೆಲ್ ಕೆಲಸದಲ್ಲಿ ತೊಡಗಿದ್ದ. ಮೂರು ದಿನ ಬಳಿಕ ನಿಮಿಷಾಂಭ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ್ದ ಶ್ರೀನಾಥ್ ದೇವರ ದರ್ಶನದ ಬಳಿಕ ಪೊಲೀಸರಿಗೆ ಕರೆ ಮಾಡಿ ಕೊಲೆ ವಿಷಯ ತಿಳಿಸಿ ಶರಣಾಗಿದ್ದ. ಶವ ಸಾಗಿಸಲು ಸಾಥ್ ನೀಡಿದ ಮಾವನ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದ. ಸದ್ಯ ಅರಕೆರೆ ಪೊಲೀಸರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dog power : ಬೆವರ ವಾಸನೆ ಬೆನ್ನುಹತ್ತಿ 8 ಕಿ.ಮೀ. ದೂರ ಕ್ರಮಿಸಿ ಕೊಲೆಗಾರನನ್ನು ಹಿಡಿದ ಸೂಪರ್‌ಸ್ಟಾರಿಣಿ ತಾರಾ!

Exit mobile version