Site icon Vistara News

ಹಳೆ ವೈಷಮ್ಯದಿಂದ ಕತ್ತು ಕುಯ್ದು ಯುವಕನ ಹತ್ಯೆ

youth murder

ಮಂಡ್ಯ: ಹಳೇ ವೈಷಮ್ಯಕ್ಕಾಗಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ನೀಲನಹಳ್ಳಿ ಗ್ರಾಮದ ಗೇಟ್ ಬಳಿ ತಡರಾತ್ರಿ ಘಟನೆ ನಡೆದಿದೆ. ಲಕ್ಷ್ಮೀ ಸಾಗರ ಗ್ರಾಮದ ಧನಂಜಯ (26) ಕೊಲೆಯಾದ ಯುವಕ. ಹಳೇ ವೈಷಮ್ಯದಿಂದಾಗಿ ದುಷ್ಕರ್ಮಿಗಳು ಕತ್ತು ಕುಯ್ದು ಕೊಲೆ ಮಾಡಿದ್ದಾರೆ. ರೌಡಿಶೀಟರ್ ರೋಹಿತ್ ಮತ್ತು ಆತನ ಸಹಚರರಿಂದ ಈ ಬರ್ಬರ ಕೃತ್ಯ ನಡೆದಿದೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತ ಧನಂಜಯ ಪಾಂಡವಪುರ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಮೇಲುಕೋಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಸಿನಿಮಾ ಸೇರುವ ಆಸೆಯಿಂದ ಬಂದವನು ಪಿಜಿ ಅವ್ಯವಸ್ಥೆಯಿಂದ ಹೆಣವಾದ! ಸತ್ತು 2 ದಿನವಾದರೂ ಗೊತ್ತೇ ಆಗಲಿಲ್ಲ

Exit mobile version