Site icon Vistara News

ಮಣಿಪಾಲದ ಫರ್ನೀಚರ್‌ ಅಂಗಡಿಯಲ್ಲಿ ಅಗ್ನಿ ಅವಘಡ!

ಉಡುಪಿ: ಉಡುಪಿಯಿಂದ ಮಣಿಪಾಲಕ್ಕೆ ಪ್ರಯಾಣಿಸುವ ರಸ್ತೆಯಲ್ಲಿ ಭಾರಿ ಪ್ರಮಾಣದ ಅಗ್ನಿ ದುರಂತ ಸಂಭವಿಸಿದೆ. ಮಣಿಪಾಲದ ಲಕ್ಷ್ಮೀನಗರ ಬಳಿ ಇರುವ ಸುಧಾ ಫರ್ನೀಚರ್ಸ್‌ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಸದ್ಯ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಶಾರ್ಟ್‌ ಸರ್ಕ್ಯೂಟ್‌ ಮೂಲಕ ಬೆಂಕಿ ತಗುಲಿರುವ ಸಾಧ್ಯತೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುಧಾ ಫರ್ನೀಚರ್‌ ಪಕ್ಕದಲ್ಲೇ ಇದ್ದ ಹೋಟೆಲ್‌ ಕೂಡ ಬೆಂಕಿಗೆ ಆಹುತಿಯಾಗಿದೆ. ಈ ದುರಂತದಲ್ಲಿ ಭಾರಿ ಮೌಲ್ಯದ ಫರ್ನೀಚರಗಳು ಹಾಗೂ ಕಚ್ಚಾ ವಸ್ತಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ. 40 ಲಕ್ಷಕ್ಕೂ ಮೇಲ್ಪಟ್ಟು ನಷ್ಟ ಸಂಭವಿಸಿರುವ ಸಾಧ್ಯತೆಯಿದೆ. ಸುಧಾ ಫರ್ನೀಚರ್‌ ಹಾಗೂ ಹೋಟೆಲ್‌ ಮಾಲೀಕರು ನಷ್ಟ ಅನುಭವಿಸಿ ದುಃಖಿಸಿದ್ದಾರೆ.

ಸ್ಥಳೀಯ ಅಗ್ನಿಶಾಮಕದಳ ಸಿಬ್ಬಂದಿ ಘಟನೆ ಸಂಭವಿಸಿದ ಸ್ಥಳಕ್ಕೆ ಕೂಡಲೇ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವವಿಯಾದರು.

https://vistaranews.com/wp-content/uploads/2022/04/WhatsApp-Video-2022-04-21-at-10.02.00-AM.mp4

ಹೆಚ್ಚಿನ ಓದಿಗಾಗಿ: ಸೆಲ್ಫಿ ತೆಗೆಯಲು ಹೋದ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರುಪಾಲು

Exit mobile version