Site icon Vistara News

ಮಂತ್ರಿಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿಗೆ ನಿರೀಕ್ಷಣಾ ಜಾಮೀನು

sushil panduranga mantri

ಬೆಂಗಳೂರು: ಮಂತ್ರಿ ಮಾಲ್ ಸಿಎಂಡಿ ಸುಶೀಲ್ ಪಾಂಡುರಂಗ್‌ ಅವರಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ. ಸುಶೀಲ್‌ರ ಮಗ ಪ್ರತೀಕ್‌ಗೂ ನಿರೀಕ್ಷಣಾ ಜಾಮೀನು ಲಭಿಸಿದೆ. ಸಿಸಿಎಚ್ 1 ಇಡಿ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಸುಶೀಲ್‌ರ ಪರವಾಗಿ ಸಿ.ವಿ.ನಾಗೇಶ್, ಕಿರಣ್ ಜವಳಿ ಮತ್ತು ಸಂಜಯ್ ಯಾದವ್ ಬಿ. ವಕಾಲತ್ತು ವಹಿಸಿ ವಾದಿಸಿದ್ದರು.

ಇ.ಡಿ. ಅಧಿಕಾರಿಗಳು ಸರ್ಚ್ ವಾರಂಟ್ ಪಡೆದು ಮಂತ್ರಿ ಗ್ರೂಪ್‌ನ ಸಿಎಂಡಿ ಸುಶೀಲ್ ಪಾಂಡುರಂಗ ಅವರಿಗೆ ಸಂಬಂಧಿಸಿದ 10 ಕಡೆಯಲ್ಲಿ ಕಳೆದ ಜೂನ್‌ 24ರಂದು ದಾಳಿ ನಡೆಸಿದರು. ಈ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಸುಶೀಲ್ ಅವರ ಕಚೇರಿ, ನಿವೇಶನ, ವಂಚನೆ ನಡೆದಿದೆ ಎಂದು ಹೇಳಲಾಗಿರುವ ನಿರ್ಮಾಣಗೊಂಡಿರುವ ಕಟ್ಟಡಗಳಿಗೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ, ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಶೀಲ್ ಪಾಂಡುರಂಗ ಮಂತ್ರಿ ಅವರಿಗೆ ಜೂನ್ 25ರಂದು ಇ.ಡಿ. ಸಮನ್ಸ್ ನೀಡಿತ್ತು.

ದಕ್ಷಿಣ ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾದ ಮಂತ್ರಿ ಗ್ರೂಪ್ ಮೇಲೆ ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಅಕ್ರಮ ಹಣ ಸಂಪಾದನೆ ಆರೋಪದಲ್ಲಿ ಪ್ರತಿಷ್ಠಿತ ಮಂತ್ರಿ ಸಮೂಹ ಸಂಸ್ಥೆಯ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಪಡೆದಿತ್ತು.

ಇದನ್ನೂ ಓದಿ | ʼಮಂತ್ರಿʼ ಗ್ರೂಪ್‌ ಸಿಎಂಡಿ ಸುಶೀಲ್‌ ಪಾಂಡುರಂಗ್‌ಗೆ ಸಂಬಂಧಪಟ್ಟ 10 ಕಡೆಯಲ್ಲಿ ಇ.ಡಿ ದಾಳಿ

Exit mobile version