Site icon Vistara News

Minors love tragedy : ಲಾರಿಯಡಿಗೆ ಬಿದ್ದು ಭಗ್ನಪ್ರೇಮಿ ಬಾಲಕ, 10ನೇ ತರಗತಿ ವಿದ್ಯಾರ್ಥಿನಿಯ ಜತೆಗೆ ಇತ್ತಾ ಪ್ರೇಮ ಪ್ರಕರಣ?

Love story

#image_title

ಚಿಕ್ಕಬಳ್ಳಾಪುರ: ಇನ್ನೂ ಜಗತ್ತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದ ವಯಸ್ಸಿನಲ್ಲೇ ಪ್ರೀತಿ, ಕಾಮದ ಬಲೆಗೆ ಬಿದ್ದು ನರಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಂಥಹುದೇ ವಿಕೃತ ಮನೋಸ್ಥಿತಿಗೆ ಒಳಗಾಗಿ ಇನ್ನೂ 17ರ ವಯಸ್ಸಿನಲ್ಲೇ ಭಗ್ನ ಪ್ರೇಮದ ನೋವನ್ನು ಅನುಭವಿಸಿದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ ಬಾಲಕ ಹೆದ್ದಾರಿಯಲ್ಲಿ ಲಾರಿಯಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ರಾಷ್ಟ್ರೀಯ ಹೆದ್ದಾರಿ 44ರ ಯರ್ರಲಕ್ಕೇನಹಳ್ಳಿ ಕ್ರಾಸ್ ಬಳಿ ಲಾರಿಯಡಿ ಬಿದ್ದು ಪ್ರಾಣ ಕಳೆದುಕೊಂಡಿರುವ ಬಾಲಕನನ್ನು ಬೀಚಗಾನಹಳ್ಳಿ ಗ್ರಾಮದ ಮನೋಹರ್ (17) ಎಂದು ಗುರುತಿಸಲಾಗಿದೆ.

ಮನೋಹರ್‌ ಪಿಯುಸಿ ಓದುತ್ತಿದ್ದು, ಆತ ಬೀಚಗಾನಹಳ್ಳಿಯ ಕಸ್ತೂರ್ಬಾ ಆರ್.ಎಂ.ಎಸ್.ಎ ವಸತಿ ಶಾಲೆಯ ವಿದ್ಯಾರ್ಥಿನಿ‌ಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ ಎನ್ನಲಾಗಿದೆ.

ಆತನ ಕೈಯನ್ನು ಬ್ಲೇಡಿನಿಂದ ಕೊಯ್ಯಲಾಗಿದ್ದು, ಆತ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ಲಾರಿಯಡಿಗೆ ಜಿಗಿದನೇ ಎನ್ನು ಪ್ರಶ್ನೆಗಳಿವೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಯರ್ರಲಕ್ಕೇನಹಳ್ಳಿ ಕ್ರಾಸ್‌ನಲ್ಲಿ ನಡೆದ ಈ ಘಟನೆಯ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರಿಬ್ಬರ ಚಿತ್ರಗಳು ವೈರಲ್‌ ಆಗಿದ್ದವು..

ಸ್ಥಳೀಯರು ಹೇಳುವ ಪ್ರಕಾರ ವಿದ್ಯಾರ್ಥಿನಿ ವಾಸವಾಗಿರುವ ಹಾಸ್ಟೆಲ್‌ನ ಅವ್ಯವಸ್ಥೆಯೇ ಮಕ್ಕಳು ದಾರಿ ತಪ್ಪಲು ಕಾರಣ. ಕಸ್ತೂರ್ಬಾ ಹಾಸ್ಟೆಲ್‌ ನಿರ್ಗತಿಕ ಹೆಣ್ಮಕ್ಕಳಿಗಾಗಿ ರೂಪಿಸಿದ್ದು. ಆದರೆ, ಇಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎನ್ನಲಾಗುತ್ತಿದೆ. ಕೆಲವು ಸಮಯದ ಹಿಂದೆ ಇಲ್ಲಿನ ಹಾಸ್ಟೆಲ್‌ಗೆ ಆಗಾಗ ಹುಡುಗರು ಹೋಗಿ ಚುಡಾಯಿಸಿದ ಘಟನೆಗಳು ನಡೆದಿದ್ದವು. ಅದಷ್ಟೇ ಅಲ್ಲ, ಇದೇ ಬಾಲಕ ಹಾಸ್ಟೆಲ್‌ಗೆ ಹೋಗಿ ವಿದ್ಯಾರ್ಥಿನಿಯ ಜತೆಗೆ ಮಲಗಿಕೊಂಡು ತೆಗೆದ ಚಿತ್ರಗಳು ವೈರಲ್‌ ಆಗಿದ್ದವು. ಈ ಚಿತ್ರಗಳನ್ನು ನೋಡಿದ ಸಾರ್ವಜನಿಕರು ಇದೇನು ಹಾಸ್ಟೆಲಾ? ಕ್ಲಬ್ಬಾ ಎಂದು ಪ್ರಶ್ನಿಸಿದ್ದರು. ಇದೀಗ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಆತನ ತಂದೆ ಹಿಂದೆಯೇ ತೀರಿಕೊಂಡಿದ್ದು, ತಾಯಿ ಮಾತ್ರ ಇದ್ದಾರೆ. ಅಪ್ರಾಪ್ತರು ಹಾದಿ ತಪ್ಪಿದರೆ ಆಗುವ ದುರಂತಕ್ಕೆ ಇದು ಒಂದು ಉದಾಹರಣೆ.

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

ಬೆಂ.ಗ್ರಾಮಾಂತರ: ತಮಿಳುನಾಡಿನ ಹೊಸೂರು ಸಮೀಪದ ಬಾಗಲೂರಿನ ಕೆರೆಯಲ್ಲಿ ಮುಳುಗಿ (Drown in lake) ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೆರೆಯಲ್ಲಿ ಈಜಲು ತೆರಳಿದ್ದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ.

ಬಾಗಲೂರು ಗ್ರಾಮದ ವಿನೋದ್ ಸಿಂಗ್, ಶಶಾಂಕ್ ಮೃತ ಬಾಲಕರು. ವಿಷಯ ತಿಳಿದು ಬಾಗಲೂರು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಬಾಗಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿರುಪತಿಯಿಂದ ಮರಳುತ್ತಿದ್ದಾಗ ಅಪಘಾತ; ಕೆಜಿಎಫ್‌ ದಂಪತಿ ಸ್ಥಳದಲ್ಲೇ ಸಾವು

ಕೋಲಾರ: ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆ ಚಂದ್ರಗಿರಿ-ಕಾಸಿಪಂಟ್ಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road accident) ಕೆಜಿಎಫ್‌ ಮೂಲದ ದಂಪತಿ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಡಿಕ್ಕಿಯ ಹೊಡೆತಕ್ಕೆ ಕಾರು ನುಚ್ಚುನೂರಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್‌ನ ದಂಪತಿಗಳಾದ ಗೋಪಿನಾಥ್ ಮತ್ತು ಶ್ಯಾಮಲಾ ಅವರು ತಿರುಪತಿಗೆ ಹೋಗಿದ್ದರು. ತಿರುಪತಿಯಲ್ಲಿ ದೇವರ ದರ್ಶ ಮುಗಿಸಿ ಹಿಂದಿರುಗುವಾಗ ಅಪಘಾತ ನಡೆದಿದೆ. ಚಂದ್ರಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Karnataka Election 2023 : ಕಾಂಗ್ರೆಸ್‌ಗೆ ರಘು ಆಚಾರ್‌ ರಾಜೀನಾಮೆ; ಚಿತ್ರದುರ್ಗದಲ್ಲಿ ಜೆಡಿಎಸ್‌ ಬಲಪಡಿಸಲು ಪ್ರಯತ್ನ

Exit mobile version