Site icon Vistara News

Murder Case: ಹಳೇ ಹುಬ್ಬಳ್ಳಿಯಲ್ಲಿ ಚಾಕು ಇರಿತದಿಂದ ಯುವಕ ಸಾವು

Khader Basha Bepari

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಚಾಕು ಇರಿತದಿಂದ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನನ್ನು ಕೊಲೆ (Murder Case) ಮಾಡಲಾಗಿದೆ.

ಖಾದರ್ ಬಾಷಾ ಬೆಪಾರಿ (26) ಮೃತ ಯುವಕ. ಹಳೇ ಹುಬ್ಬಳ್ಳಿಯ ಸಿದ್ದಿಕಿ ಕಲ್ಯಾಣ ಮಂಟಪದ ಎದುರು ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾನೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident : ಸವಾರನ ಎದೆಗೆ ಅಪ್ಪಳಿಸಿತ್ತು ಮತ್ತೊಂದು ಬೈಕ್‌!

ಸ್ಕಿಡ್‌ ಆಗಿ ಘಟಪ್ರಭಾ ನದಿಗೆ ಬಿದ್ದ ಬೈಕ್‌; ನೀರಿನಲ್ಲಿ ಕೊಚ್ಚಿಹೋದ ಸವಾರರು

ಬೆಳಗಾವಿ: ಬೈಕೊಂದು ಸ್ಕಿಡ್‌ ಆಗಿ ನದಿಗೆ ಉರುಳಿ ಬಿದ್ದು (Bike falls into river), ಇಬ್ಬರು ಸವಾರರು ನೀರಿನಲ್ಲಿ ಕೊಚ್ಚಿ ಹೋದ (two riders swept away)ಭಯಾನಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ (Road accident) ನಡೆದಿದೆ.

ಬೆಳಗಾವಿ ಜಿಲ್ಲೆಯ (Belagavi News) ಮೂಡಲಗಿ ತಾಲೂಕಿನ ಔರಾದಿ ಗ್ರಾಮದ ಹೊರವಲಯದಲ್ಲಿ ‌ಹರಿಯುತ್ತಿರುವ ಘಟಪ್ರಭಾ ನದಿಯ (Ghataprabha River) ಸಮೀಪ ದುರ್ಘಟನೆ ನಡೆದಿದ್ದು, ಬೈಕ್‌ ಸವಾರರಾದ ಔರಾದಿ ಗ್ರಾಮದ ಚೆನ್ನಪ್ಪ ಹರಿಜನ (38), ದುರ್ಗಾಣಿ ಹರಿಜನ (35) ನದಿ ಪಾಲಾಗಿದ್ದಾರೆ.

ಘಟಪ್ರಭಾ ನದಿಯಲ್ಲಿ ಮುಳುಗಿದವರಿಗಾಗಿ ಹುಡುಕಾಟ

ಚೆನ್ನಪ್ಪ ಹರಿಜನ ಮತ್ತು ದುರ್ಗಾಣಿ ಹರಿಜನ ಅವರು ವೈಯಕ್ತಿಕ ಕೆಲಸದ ನಿಮಿತ್ತ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. ಅವರು ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಇಲ್ಲದ ಸೇತುವೆ ಮೇಲೆ ಬೈಕ್‌ನಲ್ಲಿ ಸಾಗುತ್ತಿದ್ದರು. ಆಗ ಒಮ್ಮೆಗೇ ಬೈಕ್‌ ಸ್ಕಿಡ್‌ ಆಗಿ ಬೈಕ್‌ ಸಹಿತ ಅವರಿಬ್ಬರೂ ನೇರವಾಗಿ ನದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ | Road accident: ಬೈಕ್‌ಗೆ ಡಿಕ್ಕಿ ಹೊಡೆದು ಟೊಮ್ಯಾಟೊ ತೋಟಕ್ಕೆ ನುಗ್ಗಿದ ಕಾರು, ಇಬ್ಬರು ಸ್ಥಳದಲ್ಲೇ ಸಾವು

ಅವರಿಬ್ಬರು ನದಿಗೆ ಬಿದ್ದು ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಕೆಲವರು ಅವರ ರಕ್ಷಣೆಗೆ ಮುಂದಾದರೂ ಆಗಲೇ ಅವರು ತುಂಬ ದೂರ ಹೋಗಿ ಆಗಿತ್ತು. ಅವರ ರಕ್ಷಣೆ ಮಾಡಲು ಸಾಧ್ಯವಾಗಲೇ ಇಲ್ಲ. ಆದರೆ, ಅವರು ಸಾಗುತ್ತಿದ್ದ ಬೈಕ್‌ ಮಾತ್ರ ನೀರಿನಲ್ಲಿ ಪತ್ತೆಯಾಗಿದೆ. ಅದನ್ನು ಮೇಲೆ ತೆಗೆಯಲಾಗಿದೆ.

ಅಗ್ನಿಶಾಮಕ‌ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದು ನೀರುಪಾಲಾದವರಿಗೆ ಶೋಧಕಾರ್ಯ ನಡೆಸುತಿದ್ದಾರೆ. ಸ್ಥಳಕ್ಕೆ ಮೂಡಲಗಿ ತಾಲೂಕಿನ ಕುಲಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version