Site icon Vistara News

murugha seer | ಮತ್ತಿನ ಔಷಧ ಬೆರೆಸಿದ ಸೇಬು ತಿನ್ನಿಸಿ ಮಕ್ಕಳ ದುರ್ಬಳಕೆ, ಒಬ್ಬ ಹುಡುಗಿಯ Rape and Murder!

ಮುರುಘಾಶ್ರೀ

ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶ್ರೀಗಳು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದ ರೀತಿ, ಅದಕ್ಕೆ ಬಳಸುತ್ತಿದ್ದ ತಂತ್ರಗಳು ಬೆಚ್ಚಿಬೀಳಿಸುವಂತಿವೆ. ಅವರು ಮತ್ತಿನ ಔಷಧ ಬೆರೆಸಿದ ಸೇಬು ತಿನ್ನಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ, ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಯನ್ನೇ ಮಾಡಲಾಗಿದೆ ಎನ್ನುವುದು ಇನ್ನೊಂದು ಗಂಭೀರ ಆರೋಪ.

ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾದ ೬೯೪ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಹಲವಾರು ಆತಂಕಕಾರಿ ಮಾಹಿತಿಗಳು ಬಯಲಾಗಿವೆ. ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್‌ಪಿ ಅನಿಲ್‌ ನೇತೃತ್ವದಲ್ಲಿ ತನಿಖೆ ನಡೆದಿತ್ತು. ತಲಾ ೩೪೭ ಪುಟಗಳ ಎರಡು ಸೆಟ್‌ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮುರುಘಾಶ್ರೀಗಳು ಮೊದಲ ಆರೋಪಿಯಾಗಿದ್ದರೆ, ವಾರ್ಡನ್‌ ರಶ್ಮಿ ಅವರು ಎರಡನೇ ಆರೋಪಿಯಾಗಿದ್ದಾರೆ. ಮಠದ ಕಿರಿಯ ಸ್ವಾಮೀಜಿ ಅವರು ಮೂರನೇ ಆರೋಪಿ. ಮಠದ ಕಾರ್ಯದರ್ಶಿ ಪರಮಶಿವಯ್ಯ ಅವರು ನಾಲ್ಕನೇ ಆರೋಪಿಯಾಗಿದ್ದಾರೆ ವಕೀಲ ಗಂಗಾಧರಯ್ಯ ಅವರು ಐದನೇ ಆರೋಪಿ. ಆದರೆ, ಮಠದ ಕಿರಿಯ ಸ್ವಾಮೀಜಿ ಮತ್ತು ವಕೀಲ ಗಂಗಾಧರಯ್ಯ ಅವರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಲೈಂಗಿಕ ಕಿರುಕುಳಕ್ಕೆ ಹಲವು ಬಗೆ
ಹಾಸ್ಟೆಲ್‌ನ ಬಾಲಕಿಯರ ಮೇಲೆ ಯಾವ ಯಾವ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿತ್ತು ಎನ್ನುವ ವಿಚಾರದಲ್ಲಿ ಹಲವು ರಹಸ್ಯಗಳು ಚಾರ್ಜ್‌ಶೀಟ್‌ ಮೂಲಕ ಬಯಲಿಗೆ ಬಂದಿವೆ.

ಲೇಡಿ ವಾರ್ಡನ್‌ ರಶ್ಮಿಯನ್ನು ಬಳಸಿಕೊಂಡು ಶ್ರೀಗಳು ಮಕ್ಕಳನ್ನು ಕರೆಸಿಕೊಳ್ಳುತ್ತಿದ್ದರು ಎನ್ನುವುದು ಅತ್ಯಂತ ಗಂಭೀರ ಆರೋಪ. ರಶ್ಮಿ ಅವರು ಶ್ರೀಗಳಿಗೆ ಬೇಕೆನಿಸಿದ ಸಂದರ್ಭದಲ್ಲಿ ಮಕ್ಕಳನ್ನು ಕಳುಹಿಸಿಕೊಡುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಮಕ್ಕಳನ್ನು ಕರೆಸಿಕೊಳ್ಳುವ ಶ್ರೀಗಳು ಅವರಿಗೆ ಮತ್ತು ಬರುವ ಔಷಧ ಬೆರೆಸಿದ ಸೇಬ ನೀಡಿ, ಅವರನ್ನು ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಶ್ರೀಗಳು ತಮ್ಮ ಕಚೇರಿಯಲ್ಲಿ, ಬೆಡ್‌ ರೂಂ ಮಾತ್ರವಲ್ಲ ಬಾತ್‌ರೂಂನಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಸ್ವಾಮೀಜಿಯ ಈ ಕಾಮುಕ ಕೃತ್ಯವನ್ನು ವಿರೋಧಿಸಿದರೆ ಜೀವ ಬೆದರಿಕೆ ಒಡ್ಡಲಾಗುತ್ತಿತ್ತು. ಒಂದು ವೇಳೆ ಒಪ್ಪದಿದ್ದರೆ ಲೇಡಿ ವಾರ್ಡನ್ ರಿಂದ ಶಿಕ್ಷೆ ಕೊಡಿಸಲಾಗುತ್ತಿತ್ತು ಎಂದು ತಿಳಿಸಲಾಗಿದೆ.

೧೦ಕ್ಕೂ ಹೆಚ್ಚು ಮಕ್ಕಳು ಬಲಿಪಶುಗಳು, ಒಬ್ಬಳ ಕೊಲೆ!
ಚಾರ್ಜ್‌ಶೀಟ್‌ನಲ್ಲಿ ಇನ್ನೂ ಹಲವು ಗಂಭೀರ ವಿಚಾರಗಳಿವೆ. ಶ್ರೀಗಳು ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಅದರಲ್ಲಿ ಹೇಳಲಾಗಿದೆ. ಅದಕ್ಕಿಂತಲೂ ಗಂಭೀರವಾದ ವಿಚಾರವೆಂದರೆ, ಕೆಲವು ವರ್ಷದ ಹಿಂದೆ ಒಬ್ಬ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಯನ್ನೂ ಮಾಡಲಾಗಿದೆ!

ಆಂಧ್ರದ ಬಾಲಕಿಯೊಬ್ಬಳು ಮಠದ ಹಾಸ್ಟೆಲ್‌ನಲ್ಲಿದ್ದಳು. ಆಂಧ್ರ ಪ್ರದೇಶಕ್ಕೆ ತೆರಳುವಾಗ ಆಕೆ ಅಪಘಾತದಲ್ಲಿ ಮೃತಪಟ್ಟಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆದು ಬಳಿಕ ಕೊಲೆ ಮಾಡಲಾಗಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಸಂತ್ರಸ್ತ ಬಾಲಕಿಯರ ಹೇಳಿಕೆ ವೇಳೆ ಈ ವಿಷಯ ಬಯಲಾಗಿದ್ದು, ಪೊಲೀಸರು ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಕೀಲ ಶ್ರೀನಿವಾಸ್‌ ಇನ್ನಷ್ಟು ಸ್ಫೋಟಕ ಮಾಹಿತಿ
ಈ ನಡುವೆ, ಬಾಲಕಿಯರ ಪರ ವಕೀಲ ಶ್ರೀನಿವಾಸ್‌ ಇನ್ನೂ ಕೆಲವು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಆರೋಪಿ ಮುರುಘಾಶ್ರೀಗಳು ಹಣ್ಣು, ಚಾಕೊಲೇಟ್‌ಗಳಲ್ಲಿ ಮತ್ತು ಬರುವ ಅಂಶಗಳನ್ನು ಸೇರಿಸಿ ಪ್ರಜ್ಞೆ ತಪ್ಪಿಸುತ್ತಿದ್ದರು. ಬಳಿಕ ಎಚ್ಚರವಾದಾಗ ವಿವಸ್ತ್ರವಾಗಿ ಇರುತ್ತಿದ್ದರು! ಆರೋಪಿಗಳು ಮಕ್ಕಳು ಬೇಡ ಬೇಡ ಎಂದರೂ ಹಣ್ಣು ತಿನ್ನಿಸುತ್ತಿದ್ದರು. ಪದೇಪದೆ ಈ ರೀತಿ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಶ್ರೀಗಳು ಸ್ನಾನ ಮಾಡುವ ವೇಳೆ ಮೈ ಉಜ್ಜಿಕೊಳ್ಳಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಅವರಿಂದ ಮಸಾಜ್‌ ಕೂಡಾ ಮಾಡಿಕೊಳ್ಳುತ್ತಿದ್ದು. ಹೇಳಿದ ಹಾಗೆ ಕೇಳದೆ ಹೋದರೆ ಹೊಡೆಯುತ್ತಿದ್ದರು ಎಂದು ಜಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ತಾಂತ್ರಿಕ ಸಾಕ್ಷಿ, ಮೆಡಿಕಲ್ ಸಾಕ್ಷಿಗಳನ್ನು ನೀಡಲಾಗಿದೆ. ಮತ್ತಷ್ಟು ಮಕ್ಕಳು ದೂರು ನೀಡಿದರೆ ಮುರುಘಾಶ್ರೀಗೆ ಕಂಟಕವಾಗಲಿದೆ ಎಂದು ಯುವತಿಯರ ಪರ ವಕೀಲ ಶ್ರೀನಿವಾಸ್ ಹೇಳಿದ್ದಾರೆ.

ಕಾಟಾಚಾರದ ಕೌನ್ಸೆಲಿಂಗ್‌
ಈ ನಡುವೆ, ಚಿತ್ರದುರ್ಗದ ಸಿಡಬ್ಲ್ಯುಸಿ ಅಧಿಕಾರಿಗಳು ಮಕ್ಕಳ ಕೌನ್ಸೆಲಿಂಗನ್ನು ಸರಿಯಾಗಿ ಮಾಡಿಲ್ಲ. ಒಂದೇ ದಿನ‌ 80 ಮಕ್ಕಳನ್ನು ಕಾಟಾಚಾರಕ್ಕೆಂಬಂತೆ ಕೌನ್ಸೆಲಿಂಗ್‌ ಮಾಡಿದ್ದಾರೆ. ಸರಿಯಾಗಿ ಮಕ್ಕಳ ಕೌನ್ಸೆಲಿಂಗ್‌ ಮಾಡಿದ್ರೆ ಮತ್ತಷ್ಟು ಪ್ರಕರಣ ಹೊರಬರಲಿದೆ. ಆದರೆ ಆ ಕೆಲಸವನ್ನು ಚಿತ್ರದುರ್ಗದ ಅಧಿಕಾರಿಗಳು ಹಾಗೂ ಪೊಲೀಸರು ಮಾಡಿಲ್ಲವೆಂದು ಶ್ರೀನಿವಾಸ್‌ ಆರೋಪಿಸಿದರು.

ಒಂದು ವೇಳೆ ಪ್ರಕರಣದ ತನಿಖೆ ಸರಿಯಾದ ಮಾದರಿಯಲ್ಲಿ ನಡೆದರೆ, ಪೊಕ್ಸೋ ಪ್ರಕರಣದಲ್ಲಿ ಕನಿಷ್ಠ 20 ವರ್ಷ ಜೈಲು ಶಿಕ್ಷೆ ಆಗಲಿದೆ. ಗರಿಷ್ಠ ಆರೋಪ ಸಾಬೀತಾದರೆ ಮರಣದಂಡನೆ ಕೂಡಾ ವಿಧಿಸಬಹುದು ಎಂದಿದ್ದಾರೆ ವಕೀಲ ಶ್ರೀನಿವಾಸ್‌.

ಇದನ್ನೂ ಓದಿ |ಮುರುಘಾಶ್ರೀ ಪ್ರಕರಣ | 2ನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮುರುಘಾಶರಣರು ಮೂರು ದಿನ ಪೊಲೀಸ್‌ ಕಸ್ಟಡಿಗೆ

Exit mobile version