Site icon Vistara News

ಗೋಪೂಜೆ ಸಲ್ಲಿಸಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ

ಗೋಪೂಜೆ

ಚಿಕ್ಕೋಡಿ: ಬಲಿಪಾಡ್ಯಮಿ ಪ್ರಯುಕ್ತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಅವರು ಬುಧವಾರ ಗೋವುಗಳಿಗೆ ಪೂಜೆ ಸಲ್ಲಿಸಿದರು. ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ತೋಟದ ಮನೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೋ ಪೂಜೆ ನೆರವೇರಿಸಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತವನಂದಿ, ಚಂದ್ರಗುತ್ತಿ, ಆನವಟ್ಟಿ ಸೇರಿ ಕಸಬಾ ಹೋಬಳಿಯಲ್ಲಿ ಗೋವುಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸುವ ಮೂಲಕ ಬೆಳಕಿನ ಹಬ್ಬ ಆಚರಿಸಲಾಯಿತು.

ಇದನ್ನೂ ಓದಿ | CM Deepavali | ಆರ್ಟ್‌ ಆಫ್‌ ಲಿವಿಂಗ್‌ ಸೆಂಟರ್‌ನಲ್ಲಿ ಗೋಪೂಜೆ ಮಾಡಿ ಗೋವಿನ ಹಣೆಗೆ ಮುತ್ತಿಟ್ಟ ಬೊಮ್ಮಾಯಿ

Exit mobile version