Site icon Vistara News

Attack on youth: ನಾದಿನಿ ಜತೆ ಅಶ್ಲೀಲ ವರ್ತನೆ ಪ್ರಶ್ನಿಸಿದ್ದಕ್ಕೆ ಯದ್ವಾತದ್ವಾ ಹಲ್ಲೆ, ಮುಖಕ್ಕೆ ಮೂತ್ರ ಮಾಡಿ ವಿಕೃತಿ

Attack on youth in Mysore

ಮೈಸೂರು: ತನ್ನ ನಾದಿನಿ ಜತೆ ಅಶ್ಲೀಲವಾಗಿ (Indescent Behaviour) ನಡೆದುಕೊಂಡಿದ್ದನ್ನು ಪ್ರಶ್ನಿಸಿದ ಯುವಕನಿಗೆ ಆಂಬ್ಯುಲೆನ್ಸ್ ಡ್ರೈವರ್‌ (Ambulance driver) ಒಬ್ಬ ಮಾರಣಾಂತಿಕವಾಗಿ ಹಲ್ಲೆ (Murderous attack) ಮಾಡಿದ್ದಾನೆ. ಮನ ಬಂದಂತೆ ಥಳಿಸಿದ್ದು (Attack on youth) ಮಾತ್ರವಲ್ಲ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ ಆಂಬ್ಯುಲೆನ್ಸ್ ಡ್ರೈವರ್.

ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್‌ನ ಆಂಬ್ಯುಲೆನ್ಸ್‌ ಡ್ರೈವರ್ ಸಂದೇಶ್ ಈ ರೀತಿಯಾಗಿ ವಿಕೃತಿ ಮೆರೆದವನು. ಅದೇ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಮಹೇಶ್ ಮೇಲೆ ಆತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೀಗ ಮಹೇಶ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶೌಚಾಲಯಲ್ಲಿ ಕ್ಯಾಮೆರಾ ಇಟ್ಟಿದ್ದ ಕಿರಾತಕ!

ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿದ್ದ ಮಹೇಶ್‌ನನ್ನು ಭೇಟಿಯಾಗಲು ಆಗಾಗ ಅವನ ನಾದಿನಿ ಬರುತ್ತಿದ್ದಳು. ಆಗ ಆಂಬ್ಯುಲೆನ್ಸ್‌ ಚಾಲಕ ಸಂದೇಶ್‌ ಆಕೆಯ ಜತೆಗೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನಂತೆ. ಮಹೇಶ್‌ ಅದನ್ನು ಪ್ರಶ್ನೆ ಮಾಡಿದ್ದ, ಜತೆಗೆ ಆಸ್ಪತ್ರೆ ಅಧಿಕಾರಿಗಳಿಗೆ ದೂರು ಕೂಡಾ ನೀಡಿದ್ದ. ಇದು ಸಂದೇಶ್‌ನನ್ನು ಕೆರಳಿಸಿತ್ತು.

ಕಳೆದ ಸೋಮವಾರ ಆಸ್ಪತ್ರೆಗೆ ಕೆಲಸಕ್ಕೆ ಬರುತ್ತಿದ್ದ ಮಹೇಶ್ ನನ್ನು ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿಗೆ ಕರೆದುಕೊಂಡು ಹೋಗಿರುವ ಸಂದೇಶ್ ಅಲ್ಲಿ ಗೆಳೆಯರ ಜತೆ ಸೇರಿ ಹಲ್ಲೆ ಮಾಡಿದ್ದಾನೆ.

ಸಂದೇಶ್ ಹಾಗೂ ಸ್ನೇಹಿತರು ಮಹೇಶ್ ತಲೆ ಭಾಗ ಹೊಡೆದು ಹಾಗೂ ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಮಹೇಶ್ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ‌ ಮೆರೆದಿದ್ದಾರೆ ಸಂದೇಶ್ ಹಾಗೂ ಆತನ ಸ್ನೇಹಿತರು.

ಸಂದೇಶ್‌ನ ವಿಕೃತಿ ಇದು ಮೊದಲೇನಲ್ಲ. ಆತ ಈ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್ ಗಳ ವಿಡಿಯೊ ಮಾಡಿ ಸಿಕ್ಕಿಬಿದ್ದಿದ್ದ. ಈ ವಿಚಾರಕ್ಕೆ ಕೆ.ಆರ್‌.ಆಸ್ಪತ್ರೆಯಿಂದ ಸಂದೇಶ್ ನನ್ನು ಕೆಲಸದಿಂದ ತೆಗೆಯಲಾಗಿತ್ತು. ಮತ್ತೆ ಟ್ರಾಮಾ ಸೆಂಟರ್ ಗೆ ಕೆಲಸಕ್ಕೆ ಸೇರಿದ್ದ. ಆದರೆ, ಇಲ್ಲೂ ತನ್ನ ವಿಕೃತಿಯನ್ನು ಮುಂದುವರಿಸಿದ್ದ.

ಮಳವಳ್ಳಿ ಸಮೀಪದ ಬಾರ್‌ನಲ್ಲಿ ಯುವಕರ ಹೊಡೆದಾಟ; ಕೊಲೆಯಲ್ಲಿ ಅಂತ್ಯ

ಮಂಡ್ಯ: ಬಾರ್‌ನಲ್ಲಿ ಕುಡಿದು ಮತ್ತೇರಿಸಿಕೊಂಡ ಯುವಕರ ಫೈಟ್‌ (Fight at Bar) ಕೊಲೆಯಲ್ಲಿ ಅಂತ್ಯ.ವಾದ ಘಟನೆ (Murder Case) ಮಂಡ್ಯ ಜಿಲ್ಲೆಯ (Mandya News) ಮಳವಳ್ಳಿ ತಾಲೂಕಿನ ಸಮೀಪದ ಬುಯ್ಯನದೊಡ್ಡಿಯಲ್ಲಿ ನಡೆದಿದೆ. ಗೊಲ್ಲರಹಳ್ಳಿ ಗ್ರಾಮದ ಚಂದನ್ (23) ಕೊಲೆಯಾದ ಯುವಕ. ಅವನನ್ನು ಕೊಂದವನು ಬೆಳ್ತೂರು ಗ್ರಾಮದ ನಿವಾಸಿ ನಾಗರಾಜ್ (26).

Malavalli murder

ಇವರಿಬ್ಬರೂ ಗುರುವಾರ ರಾತ್ರಿ ಬುಯ್ಯನದೊಡ್ಡಿ ಗ್ರಾಮದ ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಅವರೇನೂ ಪರಿಚಿತರಲ್ಲ. ಅವನೊಂದು ಟೇಬಲ್‌ನಲ್ಲಿ ಕುಳಿತಿದ್ದ. ಇವನು ಇನ್ನೊಂದು ಟೇಬಲ್‌ನಲ್ಲಿ ಕುಳಿತಿದ್ದ. ಆದರೆ, ದೂರವಿದ್ದರೂ ಯಾವುದೋ ಕಾರಣಕ್ಕೆ ಅವರಿಬ್ಬರ ನಡುವೆ ಕುಡಿತದ ಮತ್ತಿನಲ್ಲಿ ಜಗಳ ಶುರುವಾಗಿತ್ತು.

ಇದನ್ನೂ ಓದಿ : Udupi Murder : ಅವಳು ಮಾತುಬಿಟ್ಟಿದ್ದನ್ನು ಸಹಿಸಲಾಗದೆ ಕೊಂದೇಬಿಟ್ಟ; ಗಗನಸಖಿ ಹತ್ಯೆ Inside story

ಮಾತಿನ ಚಕಮಕಲಿ ಶುರುವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಾಗ ಬಾರ್‌ ಸಿಬ್ಬಂದಿ ಇಬ್ಬರನ್ನೂ ಬಾರ್‌ನಿಂದ ಹೊರಗೆ ಕಳುಹಿಸಿದರು. ಚಂದನ್‌ ನಾಗರಾಜ್‌ಗೆ ಏನೋ ಬೈದುಕೊಂಡು ಬಾರ್‌ನಿಂದ ಹೊರಗೆ ಹೋದ. ಚಂದನ್‌ ಮನೆಗೆ ಹೋಗಲು ಇನ್ನೇನು ಬೈಕ್‌ ಹತ್ತಬೇಕು ಎನ್ನುವಷ್ಟರಲ್ಲಿ ನಾಗರಾಜ್ ದೊಣ್ಣೆಯಿಂದ ಹೊಡೆದ. ಮಾತ್ರವಲ್ಲ, ಬೈಕ್‌ನಿಂದ ಕೆಳಗೆ ಬಿದ್ದ ಚಂದನ್ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ನಾಗರಾಜನನ್ನು ವಶಕ್ಕೆ ಪಡೆದಿದ್ದಾರೆ.

Exit mobile version