Site icon Vistara News

Hit and run | ವೃದ್ಧರ ಮೇಲೆ ಕಾರು ಹರಿದು ಸಾವು, ದ್ವೇಷದಿಂದ ಕೊಲೆ ಶಂಕೆ

hit and run

ಮೈಸೂರು: ರಸ್ತೆ ಬದಿಗೆ ಸರಿದರೂ ಬಿಡದೆ ಎದುರಿನಿಂದ ಬರುತ್ತಿದ್ದ ಕಾರು ವೃದ್ಧರ ಮೇಲೆ ಹರಿದು ಅವರನ್ನು ಬಲಿ ತೆಗೆದುಕೊಂಡಿರುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದ್ದು, ಇದನ್ನು ಉದ್ದೇಶಪೂರ್ವಕ ಕೃತ್ಯ ಎಂದು ಶಂಕಿಸಲಾಗಿದೆ.

ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಮೃತರಾದ ವ್ಯಕ್ತಿ ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಕುಲಕರ್ಣಿ (83). ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕುಲಕರ್ಣಿ ಅವರು ವಾಕಿಂಗ್‌ ಮಾಡುತ್ತಿರುವುದು, ಎದುರಿನಿಂದ ಬಂದ ಕಾರಿಗೆ ಸೈಡ್‌ ನೀಡಿದರೂ ಕಾರು ಅವರ ಮೇಲೇ ಹರಿದು ಕೆಡವಿ ಅಲ್ಲಿ ನಿಲ್ಲಿಸದೆ ಪರಾರಿಯಾಗಿರುವುದೂ ಕಂಡುಬಂದಿದೆ. ಕುಲಕರ್ಣಿ‌ ಅವರು ಇತ್ತೀಚೆಗೆ ಪಕ್ಕದ ಮನೆಯವರ ಮೇಲೆ ಕೇಸ್ ಹಾಕಿದ್ದರು. ದ್ವೇಷ ತೀರಿಸಿಕೊಳ್ಳಲು ಹಿಟ್ ಆ್ಯಂಡ್ ರನ್ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.

Exit mobile version