Site icon Vistara News

Murder case: ಬುದ್ಧಿವಾದ ಹೇಳಿದ ವ್ಯಕ್ತಿಯ ಅಪಹರಿಸಿ ಹತ್ಯೆ

Crime Image

ಮೈಸೂರು: ಬುದ್ಧಿವಾದ ಹೇಳಿದ್ದಕ್ಕಾಗಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಮನ್ಸೂರ್ ಮೈಸೂರಿನ ಕಲ್ಯಾಣಗಿರಿ ನಿವಾಸಿ ಸೈಯದ್ ಮನ್ಸೂರ್ (32) ಕೊಲೆಯಾದ ದುರ್ದೈವಿ. ಇವರು ಭಾನುವಾರದಿಂದ ನಾಪತ್ತೆಯಾಗಿದ್ದರು.

ಎನ್‌ಆರ್ ಮೊಹಲ್ಲಾದ ಜಬೀ, ಸೈಯದ್ ಝೈನುಲ್ಲಾ ಎಂಬವರ ವಿರುದ್ಧ ಹುಡುಗಿಯರನ್ನು ಚುಡಾಯಿಸುತ್ತಿದ್ದ ಕುರಿತು ಪೊಲೀಸ್‌ ಪ್ರಕರಣ ದಾಖಲಾಗಿತ್ತು. ಈತನಿಗೆ ಮನ್ಸೂರ್‌ ಬುದ್ಧಿವಾದ ಹೇಳಿದ್ದರು. ಇದರಿಂದ ಕೆರಳಿದ ಜಬೀ ಹಾಗೂ ಝೈನುಲ್ಲಾ ಮತ್ತಿಬ್ಬರು ಸೇರಿ ಮನ್ಸೂರ್ ಕೊಲೆ ಮಾಡಿದ್ದಾರೆ. ಪಾಂಡವಪುರ ನಾಲೆಯಲ್ಲಿ ಮನ್ಸೂರ್ ಶವ ಪತ್ತೆಯಾಗಿದೆ. ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎನ್‌ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder case: ಪತ್ನಿಯನ್ನು ಕೊಂದ ಕಿರಾತಕ ಆಸ್ತಿಗಾಗಿ ತಂದೆಯ ಕೊಲೆಗೂ ಸುಪಾರಿ ನೀಡಿದ!

Exit mobile version